ಕಲಬುರಗಿ : ಚಿಂಚೋಳಿ ತಾಲೂಕಿನ ಕುಂಚಾವರಂ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಮುಂಜಾನೆ ಭೂಕಂಪದ ಅನುಭವವಾಗಿದೆ. ಬೆಳಗ್ಗೆ 6.3ರ ಸುಮಾರಿಗೆ ಭೂಮಿ ನಡುಗಿದ ಅನುಭವವಾಗಿದ್ದು, ತೆಲಂಗಾಣ ಗಡಿಗೆ ಹೊಂದಿಕೊಂಡ ತಾಲೂಕಿನ ಗಡಿ ಗ್ರಾಮಗಳ ಜನ ಭಯ ಭೀತರಾಗಿದ್ದಾರೆ.
ಕುಂಚಾವರಂ, ಪೋಚಾವರಂ, ಶಿವರಾಂಪುರ, ಮೊಗದಂಪುರ, ಲಕ್ಷ್ಮಾಸಾಗರ, ಲಿಂಗಾನಗರ, ಶಿವರೆಡ್ಡಿಪಳ್ಳಿಗಳಲ್ಲಿ ಭೂಕಂಪನಜ ಅನುಭವವಾಗಿದ್ದು ರಿಕ್ಟರ್ ಮಾಪಕದಲ್ಲಿ 2.5 ಕಂಪನಾಂಕ ದಾಖಲಾಗಿದೆ.
ಕಳೆದ ಐದು ದಿನಗಳಿಂದ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಗ್ರಾಮದಲ್ಲಿ ಐದು ಬಾರಿ ಭೂಮಿ ಕಂಪಿಸಿದ್ದು ಹಳ್ಳಿಗಳ ಜನ ಮನೆಯ ಹೊರಗಿನ ಅಂಗಳದಲ್ಲಿ ನಿದ್ರಿಸುವಂತಾಗಿದೆ. ಸೋಮವಾರ ಒಂದೇ ದಿನ ಎರಡು ಬಾರಿ ಭೂಮಿ ಕಂಪಿಸಿದೆ.
ಈ ಹಿಂದೆ ಸಂಭವಿಸಿದ ಎಲ್ಲಾ ಕಂಪನಕ್ಕಿಂತ ಸೋಮವಾರ ಹೆಚ್ಚು ತೀವ್ರತೆ ಇತ್ತು. ಅಕ್ಟೋಬರ್ 7ರಂದು ರಾತ್ರಿ 12.44ರ ಸುಮಾರಿಗೆ ಚಿಂಚೋಳಿ, ಕಾಳಗಿಯ ಕೆಲವು ಕಡೆ ಭೂಮಿ ಕಂಪಿಸಿತ್ತು. ಇದು ರಿಕ್ಟರ್ ಮಾಪನದಲ್ಲಿ 2.6 ರಷ್ಟು ದಾಖಲಾಗಿತ್ತು. ಅ. 8ರಂದು ತಡರಾತ್ರಿ ಬೆಳಿಗ್ಗೆ 5.37ಕ್ಕೆ ಗಡಿಕೇಶ್ವಾರ, ತೇಗಲತಿಪ್ಪಿ, ಹಲಚೇರಾ ಮೊದಲಾದ ಕಡೆ ಅನುಭವಕ್ಕೆ ಬಂತು ಇದು ರಿಕ್ಟರ್ ಮಾಪಕದಲ್ಲಿ 3.4 ದಾಖಲಾಗಿತ್ತು. ಅ. 9ರಂದು ನಸುಕಿನ 5.37ಕ್ಕೆ ಹಾಗೂ ಅ. 10ರಂದು ಬೆಳಿಗ್ಗೆ 6.05 ಗಂಟೆಗೆ ಕೂಡ ಕೆಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿತು. ಅಕ್ಟೋಬರ್ 10ರ ಕಂಪನ 3.0 ರಷ್ಟು ತೀವ್ರತೆ ದಾಖಲಾಗಿತ್ತು.
ಈ ನಡುವೆ ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪದೇಪದೇ ಭೂಕಂಪನ ಸಂಭವಿಸುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ, ಉಮರ್ಗಾ- ಸುಲೇಪೇಟ ರಾಜ್ಯ ಹೆದ್ದಾರಿಯಲ್ಲಿ ನಾಲ್ಕು ತಾಸು ಧರಣಿ ನಡೆಸಿದರು. ಪ್ರತಿ ಕುಟುಂಬಗಳಿಗೆ ತಕ್ಷಣ ತಾಡಪತ್ರಿ, ಹಾಸಿಗೆ, ರಗ್ಗು ವಿತರಿಸಬೇಕು, ಗ್ರಾಮಸ್ಥರ ರಕ್ಷಣೆಗೆ ಜಿಂಕ್ ಶೀಟ್ನಿಂದ ತಾತ್ಕಾಲಿಕ ಶೆಡ್ ನಿರ್ಮಿಸಬೇಕು, ಭೂಕಂಪದ ಮಾಪನದ ಕೇಂದ್ರ ತೆರೆಯಬೇಕು. ನಿರಂತರ ವಿದ್ಯುತ್ ಪೂರೈಸಲು ಕ್ರಮಕೈಗೊಳ್ಳಬೇಕು, ಗ್ರಾಮದಲ್ಲಿ ಪೊಲೀಸ್ ಗಸ್ತು ನಿಯೋಜಿಸಿ, ಆರೋಗ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ನಿಯೋಜಿಸಬೇಕು ಅನ್ನುವುದು ಪ್ರತಿಭಟನಕಾರರ ಆಗ್ರಹ.
Earthquake of Magnitude:3.6, Occurred on 12-10-2021, 08:06:27 IST, Lat: 17.36 & Long: 77.30, Depth: 5 Km ,Location: Gulbarga, Karnataka, India for more information download the BhooKamp App https://t.co/EdF1STxyIw@Indiametdept @ndmaindia pic.twitter.com/o7nejTxGhD
— National Center for Seismology (@NCS_Earthquake) October 12, 2021
People living in and around Chincholi in Kalaburagi district woke up to a mild earthquake of 2.5 magnitude on the richter scale, barely 24 hours after the first jolt was felt.
Discussion about this post