ಸರ್ಕಾರದ ಹಿಡಿತಕ್ಕೆ ಸಿಗದ ಕೆಲ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಗಳೇ ಲಂಚ ಮೇಯುತ್ತಿದ್ದಾರೆ ಅಂದ್ರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಅನುಮಾನ ಶುರುವಾಗಿದೆ. ( Manjunath bangalore dc )
ಬೆಂಗಳೂರು : ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ ( Manjunath bangalore dc ) ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಹೈಕೋರ್ಟ್ ಜಡ್ಜ್ ಎಚ್.ಪಿ. ಸಂದೇಶ್ ಮಾಡಿರುವ ಟೀಕೆಯನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ.
ತಮ್ಮ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತಮ್ಮ ವಿರುದ್ಧ ಅನಪೇಕ್ಷಿತ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ತಮ್ಮ ವಿರುದ್ಧ ಮೀಡಿಯಾ ಟ್ರಯಲ್ ಶುರುವಾಗಿದೆ ಅನ್ನುವುದು ಮಂಜುನಾಥ್ ಅಳಲು.
ಇದನ್ನೂ ಓದಿ : bbmp high court : ಜ್ಯೋತಿಷ್ಯ ಕೇಂದ್ರ ಮುಚ್ಚುವಂತೆ ಆದೇಶಿಸಿದ್ದ ಬಿಬಿಎಂಪಿಗೆ ಮುಖಭಂಗ
ಹೀಗಾಗಿ ನ್ಯಾಯ ಕೊಡಿ ಎಂದು ಮಂಜುನಾಥ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿಗಳ ಜೊತೆಗೆ ಮಂಜುನಾಥ್ ಅರ್ಜಿಯೂ ಇಂದು ವಿಚಾರಣೆಗೆ ಬರಲಿದೆ. ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಮಂಜುನಾಥ್ ಈಗಾಗಲೇ ಅಮಾನತುಗೊಂಡಿದ್ದಾರೆ.
ಒಬ್ಬ ಜಿಲ್ಲಾಧಿಕಾರಿ ಅದು ಕೂಡಾ ವಿಧಾನಸೌಧದಿಂದ ಒಂದಿಷ್ಟು ದೂರದಲ್ಲೇ ಕೂತು ಲಂಚ ತಿಂದಿದ್ದಾನೆ ಅಂದ್ರೆ ಆತನ ಪ್ರಭಾವ ಎಷ್ಟರ ಮಟ್ಟಿಗೆ ಇರಬಹುದು. ಸರ್ಕಾರದ ಭಯವೇ ಇಲ್ಲದ ಅಧಿಕಾರಿ ಆತನಾಗಿರಬೇಕು ಅಥವಾ ಸರ್ಕಾರದ ಕೃಪಾಕಟಾಕ್ಷವಿರಬೇಕು.
Discussion about this post