ಮಂಡ್ಯ : ಮತದಾರರ ಮನ ಗೆಲ್ಲಲ್ಲು, ಅಭಿಮಾನಿಗಳ ಮೇಲಿನ ಪ್ರೀತಿಯಿಂದ ರಾಜಕಾರಣಿಗಳು ಬಣ್ಣ ಬದಲಾಯಿಸೋದು, ಬಟ್ಟೆ ಬದಲಾಯಿಸೋದು, ವೇಷ ಭೂಷಣ ಹಾಕಿಕೊಳ್ಳುವುದು ಹೊಸದೇನಲ್ಲ. ಅಲ್ಪಸಂಖ್ಯಾತರ ಮನ ಗೆಲ್ಲುವ ಸಲುವಾಗಿ ಟೋಪಿ, ಹಿಂದೂಗಳ ಮನ ಗೆಲ್ಲಬೇಕಾದ್ರೆ ಕುಂಕುಮ ಹಾಕಿಕೊಳ್ಳುವುದು ರಾಜಕಾರಣಿಗಳಿಗೆ ನೀರು ಕುಡಿದಷ್ಟೇ ಸಲೀಸು.
ಹೀಗೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಮಾಜಿ ಸಿದ್ದರಾಮಯ್ಯ ಒಂದು ಕ್ಷಣಕ್ಕೆ ದುಬೈ ಶೇಕ್ ಆಗಿದ್ದಾರೆ. ಮಂಡ್ಯಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಗುತ್ತಲಿನ ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬೆಂಬಲಿಗರು ದುಬೈ ಶೇಖ್ ಉಡುಪು ಕೊಟ್ಟು ತೊಡುವಂತೆ ಆಗ್ರಹಿಸಿದ್ದಾರೆ. ಅಭಿಮಾನಿಗಳ ಆಗ್ರಹಕ್ಕೆ ಮಣಿದ ಸಿದ್ದರಾಮಯ್ಯ ಶೇಖ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ.
ಈ ನಡುವೆ ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಲ್ಲಾ ಕಡೆ ಕಾಂಗ್ರೆಸ್ ಪರವಾದ ಗಾಳಿ ಇದೆ, ಮತ್ತೆ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಮುಂದೆ ನಮ್ಮದೇ ಸರ್ಕಾರ ಬರುತ್ತದೋ ಇಲ್ಲವೋ ಎಂದು ಸಿದ್ದರಾಮಯ್ಯ ಪ್ರಶ್ನೆ ಕೇಳಿದಾಗ, ಪ್ರೇಕ್ಷಕರ ಗ್ಯಾಲರಿಯಿಂದ ಹೌದೋ ಹುಲಿಯಾ ಅನ್ನುವ ಮಾತು ಕೇಳಿ ಬಂತು. ಆಗ ಸಿದ್ದರಾಮಯ್ಯ ಅಭಿಮಾನಿಗಳು ಚಪ್ಪಾಳೆ ಹೊಡೆದದ್ದೇ ಹೊಡೆದದ್ದು.
Discussion about this post