ಕಾವೇರಿ ವಿಚಾರವಾಗಿ ಸುಗ್ರೀವಾಜ್ಞೆ ಜಾರಿಗೊಳಿಸಿದ ದಿಟ್ಟತನ ತಮ್ಮ ತಂದೆ ಬಂಗಾರಪ್ಪನವರದ್ದು, ಇದನ್ನು ಮಂಡ್ಯದ ಜನರು ಎಂದೂ ಮರೆಯುವುದಿಲ್ಲ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು ಕ್ರಾಂತಿ
ರಂಗದಲ್ಲಿದ್ದ ತಮ್ಮ ತಂದೆ ಬಂಗಾರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಿದ್ದು ಇದೇ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಎಂದು ಆರೋಪಿಸಿದರು.
ಎಸ್.ಎಂ.ಕೃಷ್ಣ
ಅವರಂತಹ ದೊಡ್ಡ ನಾಯಕರು ಕಾಂಗ್ರೆಸನ್ನು ಬಿಟ್ಟು ಬಿಜೆಪಿ ಸೇರಿರುವುದು ಹಾಗೂ ಮೋದಿ ನಾಯಕತ್ವ ಈ
ದೇಶಕ್ಕೆ ಮತ್ತು ಜನರಿಗೆ ಬೇಕೆಂದು ಎಸ್ ಎಂ ಕೃಷ್ಣ ಹೇಳಿದ್ದಾರೆ.
ಬಿಜೆಪಿಯನ್ನು
ಪ್ರಬಲವಾಗಿ ವಿರೋಧಿಸುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅವರು ಕೂಡ ಇದೀಗ ಮೋದಿ ಮತ್ತೊಮ್ಮೆ
ಪ್ರಧಾನಿಯಾಗಲಿ ಎಂದಿದ್ದಾರೆ.
ಕರಾವಳಿಯ ನಾಯಕ ಜನಾರ್ಧನ ಪೂಜಾರಿ ಅವರು ಕೂಡ ಮೋದಿ ಪಿಎಂ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಹಿರಿಯರ ಆಶೀರ್ವಾದ ಕಳಕಳಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಮುಂದಿನ
ಪೀಳಿಗೆಯ ಪ್ರಗತಿಗಾಗಿ ಇದು ಅನಿವಾರ್ಯವಾಗಿದೆ ಎಂದು ಕುಮಾರ್ ಬಂಗಾರಪ್ಪ ಅಭಿಪ್ರಾಯಪಟ್ಟರು.
Discussion about this post