ಶಿವಮೊಗ್ಗ : ಇದೀಗ ಎಲ್ಲಾ ಕಡೆ ಡಿಜಿಟಲ್ ಇಂಡಿಯಾ ಬಗ್ಗೆಯೇ ಮಾತು. ಹಳ್ಳಿಗಳಲ್ಲೂ ಮೊಬೈಲ್ ನೆಟ್ ವರ್ಕ್ ರಾರಾಜಿಸಲಿದೆ ಅನ್ನುವುದು ರಾಜಕಾರಣಿಗಳ ಬಣ್ಣದ ಮಾತು. ಆದರೆ ಇವೆಲ್ಲಾವೂ ಸುಳ್ಳು ಭರವಸೆ ಅನ್ನುವುದು ಗೊತ್ತಾಗಿದ್ದು ಈ ಕೊರೋನಾ ಬಂದ ಮೇಲೆ.
ಯಾವಾಗ ವುಹಾನ್ ವೈರಸ್ ಕಾರಣಕ್ಕೆ ವರ್ಕ್ ಫ್ರಮ್ ಹೋಮ್, ಆನ್ ಲೈನ್ ಕ್ಲಾಸ್ ಪ್ರಾರಂಭಿಸಿದ್ರೋ, ಹಳ್ಳಿಗಳಲ್ಲಿ ನೆಟ್ ವರ್ಕ್ ಅನ್ನುವುದು ಬರೀ ಪೇಪರ್ ಗಳಲ್ಲಿ ಅನ್ನುವುದು ಸಾಬೀತಾಯ್ತು. ಅದೆಷ್ಟು ಗ್ರಾಮಗಳಲ್ಲಿ BSNL ಮೊಬೈಲ್ ಟವರ್ ನಿದ್ದೆ ಮಾಡಿ ವರ್ಷಗಳೇ ಕಳೆದಿದೆ. ಇನ್ನು ಕೆಲವು ಗ್ರಾಮಗಳಲ್ಲಿ ನೆಟ್ ವರ್ಕ್ ಗಾಗಿ ಬೆಟ್ಟ ಗುಡ್ಡ, ಗಿಡ ಮರ ಹತ್ತುವ ಪರಿಸ್ಥಿತಿ. ಇನ್ನು ಹಲವು ಕಡೆ ಗಿಡ ಮರ ಹತ್ತಿದ್ರು ನೆಟ್ ವರ್ಕ್ ಸಿಗೋದಿಲ್ಲ.
ಅದಕ್ಕೊಂದು ಬೆಸ್ ಎಕ್ಸಾಂಪಲ್ ಹೊಸನಗರದ ರಾವೆ ಮತ್ತು ಬೇಲೂರು ಗ್ರಾಮಗಳು. ಹೊಸನಗರದ ನಾಲ್ಕು ಗ್ರಾಮಗಳ ಪೈಕಿ ಎರಡು ಗ್ರಾಮಗಳಲ್ಲಿ ಪರವಾಗಿಲ್ಲ ಅನ್ನುವ ಮಟ್ಟಿಗೆ ನೆಟ್ ವರ್ಕ್ ಸಿಗುತ್ತದೆ. ಆದರೆ ರಾವೆ ಮತ್ತು ಬೇಲೂರು ಗ್ರಾಮದಲ್ಲಿ ನೆಟ್ ವರ್ಕ್ ಸಿಗುವುದೇ ಇಲ್ಲ. ಹೀಗಾಗಿ ಮಕ್ಕಳು ಆನ್ ಲೈನ್ ಕ್ಲಾಸ್ ಗಾಗಿ ಪರದಾಡುವಂತಾಗಿದೆ.
ಈ ಹಿನ್ನಲೆಯಲ್ಲಿ ಈಗಾಗಲೇ No network no vote ಅಭಿಯಾನ ನಡೆಸಿರುವ ಗ್ರಾಮಸ್ಥರಿಗೆ ಯಾವುದೇ ಫಲ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಪ್ರತಿಭಟನೆ ನಡೆಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಬೀದಿಗಿಳಿದಿರುವ ಗ್ರಾಮಸ್ಥರು ರಾವೆಯಿಂದ ನಗರ ನಾಡಕಚೇರಿ ತನಕ 15 ಕಿಮೀ ಪಾದಯಾತ್ರೆ ನಡೆಸಿದರು.
ಈ ವೇಳೆ ಮಾತನಾಡಿದ ಕಿಮ್ಮನ್ ರತ್ನಾಕರ್ , ಹಳ್ಳಿಗಳಲ್ಲಿ ನೆಟ್ ವರ್ಕ್ ಅನ್ನುವ ಬರೀ ಭರವಸೆಯಾಗಿದೆ. ನೆಟ್ ವರ್ಕ್ ಇಲ್ಲದಿರುವ ಕಾರಣ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Discussion about this post