ಬೆಂಗಳೂರು : ನಿಮ್ಮ ವಾಹನದ ನಂಬರ್ ಪ್ಲೇಟ್ ಮೇಲೆ ದೇವರ ಚಿತ್ರ, ಜಾತಿ ಧರರ್ಮದ ಹೆಸರು, ನಿಮ್ಮ ಸ್ಟೇಟಸ್ ಹೆಚ್ಚಿಸಿಕೊಳ್ಳುವ ಸಲುವಾಗಿ ನಿಮ್ಮ ಸಂಘ, ಸಂಸ್ಥೆಗಳ ಹೆಸರನ್ನು ಹಾಕಿಸಿದ್ರೆ ಇವತ್ತೆ ಕಿತ್ತು ಹಾಕಿಸಿ.ತಪ್ಪಿದ್ರೆ ದೊಡ್ಡ ಮೊತ್ತವನ್ನು ಪಾವತಿಸಲು ಸಿದ್ದವಾಗಿರಿ.
ಉತ್ತರ ಪ್ರದೇಶದಲ್ಲಿ ವಾಹನಗಳ ಮೇಲೆ ಯಾವುದೇ ಜಾತಿ ಹೆಸರನ್ನು ಬರೆಸಿಕೊಳ್ಳುವುದು ಅಪರಾಧ ಎಂದು ಯೋಗಿ ಸರ್ಕಾರ ನಿರ್ಧಾರ ಕೈಗೊಂಡ ಬೆನ್ನಲ್ಲೇ ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿ ಎಚ್ಚೆತ್ತುಕೊಂಡಿದೆ.
ಆರ್ಟಿಓ ನಿಯಮಗಳ ಪ್ರಕಾರವೇ ಉತ್ತರ ಪ್ರದೇಶ ಈ ಆದೇಶ ಹೊರಡಿಸಿದೆ. ಹೊರತು ಅದೇನೂ ಹೊಸ ಕಾನೂನಲ್ಲ ಅನ್ನುವುದನ್ನು ಮನಗಂಡ ನಮ್ಮ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾನೂನು ನೆನಪಿಸುವ ಸೂಚನೆಯೊಂದನ್ನು ಕೊಟ್ಟಿದ್ದಾರೆ.
ವಾಹನದ ನಂಬರ್ ಪ್ಲೇಟ್ ಮೇಲೆ ನೋಂದಣಿ ಸಂಖ್ಯೆ ಮಾತ್ರ ಇರಬೇಕು. ಹೊರತು ಮತ್ಯಾವುದೇ ಚಿತ್ರ ಬರಹಗಳು ಇರಬಾರದು ಎಂದು ಸೂಚಿಸಿದೆ.
ಹಾಗೇನಾದರೂ ಇದ್ದರೆ ಅಂತಹ ಅಂತಹ ನಂಬರ್ ಪ್ಲೇಟ್ಗಳನ್ನು ತೆರವು ಮಾಡಿ. ನೀವು ತೆರವು ಮಾಡದಿದ್ರೆ ನಾವೇ ತೆರವುಗೊಳಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಅಂದಿದೆ.
ಈ ಆದೇಶ ಸಲುವಾಗಿ ಮೋಟಾರು ವಾಹನ ಕಾಯ್ದೆ 50-51ನ್ನು ಉಲ್ಲೇಖಿಸಲಾಗಿದೆ.
Discussion about this post