ವಿಜಯಪುರ : ಜವಾಬ್ದಾರಿಯುತ ಹುದ್ದೆ ಪಡೆದ ಮೇಲೆ ಆ ಹುದ್ದೆಯ ಘನತೆ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಘನೆ ಗೌರವ ಅನ್ನುವುದೇ ಗೊತ್ತಿಲ್ಲ. ಇಲ್ಲವಾಗಿದ್ರೆ ಬಾಲಿಶ ಅನ್ನಿಸುವ ಹೇಳಿಕೆಗಳನ್ನು ಕೊಡಲು ಸಾಧ್ಯವೇ.
ವಿಜಯಪುರದ ಕಿತ್ತೂರ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ವಿವಿಧ ಪಕ್ಷ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಇದಾದ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಬಾಗಿಲು ತಟ್ಟಲಿದ್ದಾರೆ, ಮಾಜಿ ಸಚಿವ ಎಂಬಿ ಪಾಟೀಲ್ ಬಿಜೆಪಿಗೆ ಬರಲಿದ್ದಾರೆ ಅಂದಿದ್ದಾರೆ.
ನಳಿನ್ ಕುಮಾರ್ ಹೇಳಿಕೆ ಶತಮಾನ ಜೋಕ್ ಅನ್ನದೆ ವಿಧಿಯಿಲ್ಲ. ಸಿದ್ದರಾಮಯ್ಯ ಬಿಜೆಪಿ ಬಂದ್ರೆ ಅದು ಕರ್ನಾಟಕ ರಾಜಕೀಯದ ಕರಾಳ ದಿನವಾಗಲಿದೆ. ಹೋಗ್ಲಿ ಸಿದ್ದರಾಮಯ್ಯ ಬಿಜೆಪಿಗೆ ಬರ್ತಾರೆ ಅನ್ನುವುದಾದ್ರೆ ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ಸಿದ್ದವಾಗಿದೆಯೇ. ಮೊದಲು ಕಟೀಲು ಅವರು ಅದನ್ನು ಸ್ಪಷ್ಟಪಡಿಸಲಿ. ಸಿದ್ದರಾಮಯ್ಯ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಅವರು ಸಿದ್ದರಾದ್ರೆ ಬಿಜೆಪಿ ಕಾರ್ಯಕರ್ತರ ಶ್ರಮ, ಬಲಿದಾನಗಳು ವ್ಯರ್ಥವಲ್ಲವೇ. ತಳಮಟ್ಟದಲ್ಲಿ ಸಿದ್ದರಾಮಯ್ಯ ಅವರ ಸಿದ್ದಾಂತಗಳನ್ನು ವಿರೋಧಿಸಿ ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ಮಾಡುವ ಅವಮಾನವಲ್ಲವೇ.
ಈಗಾಗಲೇ ಆರ್.ಎಸ್.ಎಸ್ ಅನ್ನು ಹಿಗ್ಗಾಮುಗ್ಗಾ ಟೀಕಿಸುವ ಕುಮಾರಸ್ವಾಮಿ ಜೊತೆಗೆ ಬಿಜೆಪಿ ಮೈತ್ರಿ ಮುಂದುವರಿಸಿರುವುದನ್ನು ನೋಡಿದರೆ ಆರ್.ಎಸ್.ಎಸ್ ಅನ್ನು ತಾಲಿಬಾನ್ ಎಂದು ಕರೆದ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಸೇರಿಸಿಕೊಂಡರೂ ಅಚ್ಚರಿ ಇಲ್ಲ ಬಿಡಿ. ಒಟ್ಟಿನಲ್ಲಿ ರಾಜಕೀಯ ನೇತಾರರಿಗೆ ಸಿದ್ಧಾಂತ ಬದ್ದತೆಯಿಲ್ಲ ಅನ್ನುವುದು ಸ್ಪಷ್ಟ.
Discussion about this post