ಬೆಂಗಳೂರು : ಈ ಬಾರಿಯ ಪೊಲೀಸ್ ನೇಮಕಾತಿ ಹಗರಣ ಬೆಳಕಿಗೆ ಬಾರದಿರುತ್ತಿದ್ರೆ ಕರ್ನಾಟಕದ ಪೊಲೀಸ್ ಠಾಣೆಗಳ ಗತಿಯನ್ನು ಊಹಿಸಲು ಸಾಧ್ಯವಿರಲಿಲ್ಲ. ಲಕ್ಷ ಲಕ್ಷ ಲಂಚ ಕೊಟ್ಟು ಪಿಎಸ್ಐಯಾದವರ ಕಡೆಯಿಂದ ಅದ್ಯಾವ ನಿರೀಕ್ಷಿಸಲು ಸಾಧ್ಯವಿತ್ತು. ಕೊಟ್ಟ ಹಣವನ್ನು ತುಂಬಿಸುವುದೇ ಕಾರ್ಯವಾಗಿರುವಾಗ ಖಾಕಿಗೆಲ್ಲಿ ನ್ಯಾಯವಿತ್ತು. ಆದರೆ ಈ ಪ್ರಕರಣದಿಂದ ಈಗಿರುವ ಪೊಲೀಸರ ಮೇಲೂ ಅನುಮಾನವಂತು ಖಂಡಿತಾ ಇದೆ. ಅವರೂ ಕೂಡಾ ಲಂಚ ಕೊಟ್ಟು ಬಂದಿಲ್ಲ ಅನ್ನುವುದಕ್ಕೆ ಎಲ್ಲಿದೆ ಗ್ಯಾರಂಟಿ.
ಈ ನಡುವೆ ಬಂಧಿತ ಎಸ್ಐ ಟಾಪರ್ ಒಬ್ಬನ ತಂದೆ, ಮಗನನ್ನು ಪೊಲೀಸ್ ಮಾಡಲು 1.5 ಎಕರೆ ಅಡಿಕೆ ತೋಟ ಮಾರಿದ್ದಾರೆ ಅನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಮಗನನ್ನು ಪೊಲೀಸ್ ಮಾಡಲು 60 ಲಕ್ಷ ವ್ಯಯಿಸಿರುವ ಅವರು ಪರಿಚಯಸ್ಥರಿಂದ ಸಾಲಸೋಲ ಮಾಡಿದ್ದರಂತೆ.
ಇದೀಗ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆ ಅಘಾತಕ್ಕೆ ಒಳಗಾಗಿರುವ ಅವರು ಆಸ್ಪತ್ರೆ ಸೇರಿದ್ದಾರೆ. ಈಗಾಗಲೇ ಪರೀಕ್ಷಾ ಅಕ್ರಮ ಸಂಬಂಧ ಮಾಗಡಿ ತಾಲೂಕಿನ ಅಭ್ಯರ್ಥಿ ಎಚ್. ಯು ರಘವೀರ್ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದು ವಿಚಾರಣೆ ವೇಳೆ ಹುದ್ದೆಗಾಗಿ ಪಟ್ಟ ಕಷ್ಟವನ್ನು ವಿವರಿಸಿದ್ದಾನೆ ಅನ್ನಲಾಗಿದೆ. ಇದೇ ಆಧಾರದಲ್ಲಿ ಹಣ ಪಡೆದವರಿಂದ ಮಾಹಿತಿ ಸಂಗ್ರಹಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ಅಂದ ಹಾಗೇ ಬೆಂಗಳೂರಿನ ಪ್ರಭಾವಿ ವ್ಯಕ್ತಿಯೊಬ್ಬರು ರಘವೀರ್ ತಂದೆಯಿಂದ ಹಣ ಪಡೆದಿದ್ದಾರೆ. ಹಾಗಾದ್ರೆ ಆ ಪ್ರಭಾವಿ ವ್ಯಕ್ತಿ ಯಾರು ಅನ್ನುವುದೇ ರಹಸ್ಯ.
The 22 candidates listed in the FIR have been identified as Jagruth S, Gajendra B, Somanath Mallikarjunanaih Hiremath, Raghuveer H U, Chethan Kumara MC, Venkatesh Gouda BC, Manoj A P, Manukumar G R, Siddalingappa Padashavagi, Mamatesh Gowda S, Yashwanth Gowda H, Narayana C M, Nagesh Gowda C S, Madhu R, Yashwanth Deep C, Dileep Kumar C K, Rachana Hanamant, Shivaraja G, Praveen Kumar H R, Surinarayana K, Nagaraj C M and Raghavendra G C.
Discussion about this post