ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿರದಿರುತ್ತಿದ್ರೆ ಇಬ್ಬರು ನೀ ತಾಂಟ್ರೆ ಬಾ ತಾಂಟ್ ಎಂದು ಎರಡೇಟು EXCHANGE ಮಾಡಿರುತ್ತಿದ್ರು.
ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಪೊಲೀಸ್ ಇಲಾಖೆಯ ಕಥೆ ಏನಾಗಿದೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ಕೆಲವೇ ಕೆಲವು ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಉಳಿದಿದೆ ಬಿಟ್ರೆ ಮತ್ತೆಲ್ಲವೂ ಉಳ್ಳವರ ಪರವಾಗಿದೆ. ಇದಕ್ಕೆ ಇತ್ತೀಚೆಗೆ ನಡೆದ ಹತ್ತಾರು ಘಟನೆಗಳೇ ಸಾಕ್ಷಿ.
ಈ ನಡುವೆ ಜನಪ್ರತಿನಿಧಿಗಳು ಕೂಡಾ ಮಾನ ಮರ್ಯಾದೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದು, ಜನ ಸೇವೆಯ ಹೆಸರಿನಲ್ಲಿ ಅಧಿಕಾರ ಹಿಡಿದವರು ಕಚ್ಡ ಕೆಲಸ ಮಾಡುತ್ತಿದ್ದಾರೆ. ಸಮಾಜಕ್ಕೆ ಆದರ್ಶರಾಗಿರಬೇಕಾದ ಮಂದಿ ಜೈಲು ಸೇರುತ್ತಿರುವುದೇ ಇದಕ್ಕೆ ಬೆಸ್ಟ್ ಏಕ್ಸಾಂಪಲ್.
ಈ ನಡುವೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ಕಿತ್ತಾಡಿಕೊಂಡು ಕೈ ಕೈ ಮಿಲಾಯಿಸಲು ಮುಂದಾದ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಬಿಜೆಪಿ ವಿರುದ್ಧ ಘೋಷಣೆ ಕೂಗುವ ಮೂಲಕ ಕಾರ್ಯಕ್ರಮಕ್ಕೆ ತೊಂದರೆ ಕೊಡುತ್ತಿದ್ದರು. ಈ ವೇಳೆ ಭಾಷಣಕ್ಕೆ ಎದ್ದು ನಿಂತ ಸಚಿವ ಡಾ.ಅಶ್ವಥ್ ನಾರಾಯಣ್, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೆಂಡವಾದರು. ನಾವು ಅಭಿವೃದ್ದಿ ಮಾಡಿದ್ದೇವೆ. ಕಂಡವರ ಆಸ್ತಿ ಮೇಲೆ ಕಣ್ಣು ಹಾಕಿಲ್ಲ, ಆಸ್ತಿ ಕಬಳಿಸಿಲ್ಲ. ಯಾರಪ್ಪ ಗಂಡ್ಸು ಕೆಲಸದಲ್ಲಿ ತೋರ್ಸ್ ಎಂದು ತಿವಿದರು.
ನಮ್ಮ ರಾಮನಗರದಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ ನೋಡಿ ಸಹಿಸಲಾಗದ @INCKarnataka ನಾಯಕರು, ಬೆಂಬಲಿಗರು ಮುಖ್ಯಮಂತ್ರಿಗಳು ಆಗಮಿಸಿದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಮರೆತು ಗೂಂಡಾಗಳಂತೆ ವರ್ತಿಸಿದ್ದು ಅಕ್ಷಮ್ಯ.
— Dr. Ashwathnarayan C. N. (@drashwathcn) January 3, 2022
ನಾಡ ಗೀತೆ ಹಾಡುವಾಗ ಗಲಾಟೆ ಮಾಡುವುದು ಮತ್ತು ನಾಡ ಪ್ರಭುಗಳ ಪ್ರತಿಮೆ ಅನಾವರಣ ಮಾಡುವಾಗ ದುರ್ವರ್ತನೆ ತೋರುವುದು ಸರಿಯೇ? pic.twitter.com/9pi5TL920c
ಇದರಿಂದ ಸಿಟ್ಟಾದ ಸಂಸದ ಡಿಕೆ ಸುರೇಶ್ ಅಶ್ವಥ್ ನಾರಾಯಣ ಇದ್ದ ಕಡೆ ಧಾವಿಸಿದ್ದಾರೆ. ಡಿಕೆ ಸುರೇಶ್ ಧಾವಿಸುವ ವೇಗ ನೋಡಿದರೆ ಅನಾಹುತ ಗ್ಯಾರಂಟಿ ಅನ್ನುವಂತಿತ್ತು. ಈ ವೇಳೆ ಇಬ್ಬರ ನಡುವೆ ಪರಸ್ಪರ ಏರುಧ್ವನಿಯಲ್ಲಿ ಬಿರುಸಿನ ಮಾತುಕತೆಗಳು ನಡೆದವು.
ಇನ್ನು ಈ ವೇಳೆ ಜಗಳ ಬಿಡಿಸಬೇಕಾಗಿದ್ದ ಪರಿಷತ್ ಸದಸ್ಯ ರವಿ, ಡಿಕೆ ಸುರೇಶ್ ಗೆ ಸಾಥ್ ನೀಡಿದರು. ಜೊತೆಗೆ ಮೈಕ್ ಮೂಲಕ ಕೆಲ ಸ್ಪಷ್ಟನೆಗಳನ್ನು ನೀಡಲು ಹೋದಾಗ ಸಚಿವ ಅಶ್ವಥನಾರಾಯಣ ಅದಕ್ಕೆ ಅಡ್ಡಿಪಡಿಸಿ ಮೈಕ್ ಕಿತ್ತುಕೊಂಡರು. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿರದಿರುತ್ತಿದ್ರೆ ಇಬ್ಬರು ನೀ ತಾಂಟ್ರೆ ಬಾ ತಾಂಟ್ ಎಂದು ಎರಡೇಟು EXCHANGE ಮಾಡಿರುತ್ತಿದ್ರು
Discussion about this post