ಐಟಿ ನೋಟಿಸ್ ರಗಳೆ ನಡುವೆಯೂ ಉಪ ಚುನಾವಣೆಯ ಪ್ರಚಾರದ ಕೊನೆಯ ದಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಡಿಕೆ ಶಿವಕುಮಾರ್ ಪ್ರಚಾರ ಕಾರ್ಯಕೈಗೊಂಡರು.
ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕರು, ಆದರೆ ಯಾವುದೇ ಒಕ್ಕಲಿಗ ನಾಯಕರು ಬಂದು ನನ್ನ ಪರ ಪ್ರಚಾರ ಮಾಡಿಲ್ಲ ಎಂದು ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್, ಡಿಕೆಶಿಯವರಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಚಾರ ಕಾರ್ಯಕೈಗೊಂಡ ಡಿಕೆಶಿ, ಯಾರಾದರೂ ಜನಪ್ರತಿನಿಧಿ ಸತ್ರೆ ಉಪ ಚುನಾವಣೆ ಬರುತ್ತಿತ್ತು, ಈಗ ಪರಿಸ್ಥಿತಿ ಬದಲಾಗಿದೆ ಅಂದರು..
ಇದೇ ವೇಳೆ ಎಸ್ಟಿ ಸೋಮಶೇಖರ್ ವಿರುದ್ಧ ಕಿಡಿ ಕಾರಿದ ಡಿಕೆಶಿ, ನಿನ್ನ ಸಮಾಧಿ ನೀನೇ ಕಟ್ಟಿಕೊಳ್ತಿದ್ದೀಯ ಎಂದು ಸೋಮಶೇಖರ್ಗೆ ಎಚ್ಚರಿಕೆ ಕೊಟ್ಟಿದ್ದೆ. ಆದರೂ ಆತ ನನ್ನ ಮಾತು ಕೇಳದೆ ಬಿಜೆಪಿಗೆ ಹೋದ. ಸೋಮಶೇಖರ್ ಮತ್ತು ಮುನಿರತ್ನ ಬಂದು ಕ್ಯಾಂಟೀನ್ ಮಾಡೋಣ, ಅದಕ್ಕೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಡೋಣ ಅಂದರು. ಈಗ ಜನ್ಮ ಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ ಎಂದು ಡಿಕೆಶಿ ಆಕ್ರೋಶ ಹೊರ ಹಾಕಿದರು.
ನಾನು ಯಾವುದೇ ಲಂಚ ತೆಗೆದುಕೊಂಡಿಲ್ಲ, ನೀಲಿಚಿತ್ರ ನೋಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಆದರೂ ಬಿಜೆಪಿಯವರು ಷಡ್ಯಂತ್ರದಿಂದ ನಾನು ಜೈಲು ಸೇರುವಂತಾಯ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದನ್ನು ಡಿಕೆಶಿ ಮರೆಯಲಿಲ್ಲ.
Discussion about this post