ಬೆಂಗಳೂರು : ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತನ್ನದೇ ರೀತಿಯಲ್ಲಿ ಕೊಡುಗೆ ನೀಡಿದವರು ವೈಎಸ್ವಿ ದತ್ತಾ. ಅದರಲ್ಲೂ ದೇವೇಗೌಡರ ಪಾಲಿನ ಆಪ್ತ ಅಂದ್ರೆ ಅದು ದತ್ತಾ. ಜೆಡಿಎಸ್ ನಲ್ಲಿ ಅವರಿಗೆ ಸಾಕಷ್ಟು ಅನ್ಯಾಯಗಳಾಗಿದೆ. ಜೆಡಿಎಸ್ ಸರ್ಕಾರ ಬಂದ ಸಂದರ್ಭದಲ್ಲಿ ಅವರು ಮಂತ್ರಿಯಾಗಬೇಕಾಗಿತ್ತು. ಆದರೆ ದಳಪತಿಗಳ ನಿಗೂಢ ನಡೆಯಿಂದ ಆ ಅವಕಾಶದಿಂದ ದತ್ತಾ ವಂಚಿತರಾಗುತ್ತಿದ್ದರು. ಬೇರೆ ಯಾರಾಗಿದ್ದರೂ ಇಷ್ಟು ಹೊತ್ತಿಗೆ ನಾಲ್ಕು ಪಕ್ಷಕ್ಕೆ ಪಕ್ಷಾಂತರವಾಗಿರುತ್ತಿದ್ರು, ಆದರೆ ದತ್ತಾ ಹಾಗಲ್ಲ. ಅವರ ಪಕ್ಷ ನಿಷ್ಟೆ ಅವರೇ ಸಾಟಿ.
ಈ ನಡುವೆ ದತ್ತಾ ಕಾಂಗ್ರೆಸ್ ಪ್ರತಿಭಟನೆಯಲ್ ಪಾಲ್ಗೊಂಡು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ದೂರವಾಣಿ ಕದ್ದಾಲಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ಗುರುವಾರ ರಾಜಭವನ ಚಲೋ ಹಮ್ಮಿಕೊಂಡಿತ್ತು. ಈ ವೇಳೆ ದತ್ತಾ ಪ್ಲೇ ಕಾರ್ಡ್ ಹಿಡಿದು ಪಾಲ್ಗೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ವಿಧಾನಸೌಧದ ಕೆಂಗಲ್ ದ್ವಾರದಿಂದ ಆಗಮಿಸಿದ ಮೆರವಣಿಗೆಯಲ್ಲಿ ಆಗಮಿಸಿದ ದತ್ತಾ ಕಾಂಗ್ರೆಸ್ ನಾಯಕರಲ್ಲೇ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ಸಿದ್ದರಾಮಯ್ಯ ದತ್ತಾ ಬೆನ್ನು ತಟ್ಟಿದ್ರೆಸ ದತ್ತಾ ಡಿಕೆಶಿಯವರ ಬೆನ್ನ ಹಿಂದೆಯೇ ಹೆಜ್ಜೆ ಹಾಕಿದರು.
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರುವ ಕುರಿತಂತೆ ಮಾತನಾಡಿರುವ ದತ್ತಾ, ಕೇಂದ್ರ ಮಾಡಿರೋದು ತಪ್ಪು ಎಂದು ಹೇಳುವ ಧೈರ್ಯ ನನ್ನಲ್ಲಿದೆ. ತಪ್ಪನ್ನು ಒಪ್ಪಿಕೊಳ್ಳಲು, ಸಹಿಸಿಕೊಳ್ಳಲು ಆತ್ಮಸಾಕ್ಷಿ ಒಪ್ಪುವುದಿಲ್ಲ. ಹೀಗಾಗಿಯೇ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ ಅಂದಿದ್ದಾರೆ.
Discussion about this post