ಬೆಂಗಳೂರು : ಕರ್ನಾಟಕದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗ್ತಾರೆ ಅನ್ನುವ ಭವಿಷ್ಯವಾಣಿ ಬಂದ್ರೆ ಸಾಕು ಶೋಭಾ ಕರಂದ್ಲಾಜೆಯವರ ಹೆಸರು ಪ್ರಸ್ತಾಪವಾಗುತ್ತದೆ. ಅಷ್ಟು ಮಾತ್ರವಲ್ಲದೆ ರಾಜಕೀಯ ಪಡಸಾಲೆಯಲ್ಲೂ ಶೋಭಾ ಅವರು ಸಿಎಂ ಆಗೋದು ಗ್ಯಾರಂಟಿ ಅನ್ನುವ ಮಾತುಗಳು ಕೂಡಾ ತೇಲಿ ಬರುತ್ತದೆ.
ಆದರೆ ಇದೀಗ ಶೋಭಾ ಕರಂದ್ಲಾಜೆಯವರು ಸಿಎಂ ಆಗೋದಿಲ್ಲ ಅನ್ನುವುದು ಸ್ಪಷ್ಟವಾಗಿದೆ. ಅವರೇ ಅದನ್ನು ಸ್ಪಷ್ಟಪಡಿಸಿದ್ದು, ನಾನು ರಾಜ್ಯ ರಾಜಕೀಯಕ್ಕೆ ಮರಳೋದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಇಲಾಖೆಯ ಹೊಣೆ ವಹಿಸಿದ್ದು, ಅನೇಕ ಚುನಾವಣೆಯ ಉಸ್ತುವಾರಿಯನ್ನು ಪಕ್ಷ ಕೊಟ್ಟಿದೆ. ಹೀಗಾಗಿ ಈ ಕೆಲಸದಲ್ಲೇ ಖುಷಿಯಾಗಿದ್ದೇನೆ ಅಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ರಾಜ್ಯ ರಾಜಕೀಯಕ್ಕೆವಾಪಾಸ್ ಬರುವ ಬಗ್ಗೆ ಚರ್ಚೆಯೇ ಆಗಿಲ್ಲ. ಹೀಗಾಗಿ ನಾನು ಸಿಎಂ ಆಗುತ್ತೇನೆ ಅನ್ನುವುದು ಆಧಾರವಿಲ್ಲದ ಚರ್ಚೆ ಅಂದಿದ್ದಾರೆ.
ಶೋಭಾ ಅವರೇ ರಾಜ್ಯ ರಾಜಕೀಯ ಸಹವಾಸ ನನಗೆ ಬೇಡ ಅಂದಿದ್ದಾರೆ ಅಂದ್ರೆ, ಬಿಜೆಪಿ ಹೈಕಮಾಂಡ್ ಶೋಭಾ ಅವರನ್ನು ರಾಷ್ಟ್ರೀಯ ನಾಯಕಿಯನ್ನಾಗಿಸಲು ನಿರ್ಧರಿಸಿದಂತಿದೆ. ಇದಕ್ಕೆ ಪೂರಕವಾಗಿ ಅವರು ಈಗಾಗಲೇ ಇಂಗ್ಲೀಷ್ ಮತ್ತು ಹಿಂದಿಯ ಮೇಲೆ ಹಿಡಿತ ಕೂಡಾ ಸಾಧಿಸಿದ್ದಾರೆ.
Discussion about this post