ಮಂಡ್ಯ ಕೆ ಎಂ ದೊಡ್ಡಿಯ ಭಾರತಿನಗರ ಗ್ರಾಮದ ರೈತರೆಲ್ಲಾ ಸೇರಿ ಹಣ ಸಂಗ್ರಹಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ. ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಶನಿವಾರ ಮತ ಪ್ರಚಾರ ಮಾಡುವ ವೇಳೆ ರೈತರು ಹಣ ನೀಡಿ, ಚುನಾವಣೆ ಖರ್ಚಿಗೆ ಬಳಸಿಕೊಳ್ಳುವಂತೆ ದೇಣಿಗೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ ನಿಖಿಲ್ ಚುನಾಚಣೆಗೆ ನಿಂತಿದ್ದು ನಿಮ್ಮ ಸೇವೆ ಮಾಡಲು. ಸದ್ಯ ನನಗೆ ಆರೋಗ್ಯದ ಸಮಸ್ಯೆಯಿದೆ. ಹಾಗಾಗಿ ಮುಂದಿ ಹೋರಾಟಕ್ಕೆ ಹಾಗೂ ರೈತರ ಕೂಗಿಗೆ ನಿಖಿಲ್ ಧನಿ ಕೊಡಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಮಂಡ್ಯದ 7 ಜನ ಶಾಸಕರ ಒತ್ತಾಯದ ಮೇರೆಗೆ ನಿಂತಿದ್ದಾರೆ. ನೀವು ಯಾರದ್ದೋ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ನಿಮ್ಮ ಕಷ್ಟ, ಸುಖ ಮತ್ತು ಹಾಗು-ಹೋಗುಗಳಿಗೆ ಬರುವುದು ನಾವು ಮಾತ್ರ ಎಂದು ಗ್ರಾಮಸ್ಥರಿಗೆ ವಿಶ್ವಾಸ ತುಂಬಿದರು.
Discussion about this post