ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲಿ ಡಿಸಿಎಂ ಪರಮೇಶ್ವರ್ ಅವರ ಝೀರೋ ಟ್ರಾಫಿಕ್ ಪ್ರೀತಿಯಿಂದ ನಾಗರಿಕರು ಹೈರಾಣಾಗಿ ಹೋಗಿದ್ದರು.
ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರ ಬರುತ್ತಿದ್ದಂತೆ ಕಳೆದ ಸರ್ಕಾರದಲ್ಲಿ ಝೀರೋ ಟ್ರಾಫಿಕ್ ಪ್ರೀತಿಯಿಂದ ಜನರಿಂದ ಆದ ತೊಂದರೆ ಮತ್ತು ಪರಮೇಶ್ವರ್ ವಿರುದ್ಧ ಜನರು ಕಿಡಿ ಕಾರಿರುವುದನ್ನು ಗಮನಿಸಿದ ನಾಯಕರು ಝೀರೋ ಟ್ರಾಫಿಕ್ ಬೇಡ ಅಂದಿದ್ದರು. ಸರ್ಕಾರದಲ್ಲಿರುವ ಡಿಸಿಎಂ ಮತ್ತು ಗೃಹ ಸಚಿವರು ಝೀರೋ ಟ್ರಾಫಿಕ್ ನಿಂದ ದೂರ ಸರಿದಿದ್ದರು.
ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ನಾನು ಝೀರೋ ಟ್ರಾಫಿಕ್ ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿಯೇ ಹೇಳಿದ್ದರು.
ಆದರೆ ಇದೀಗ ಪರಂ ಅವರನ್ನು ಅಶ್ವಥ್ ನಾರಾಯಣ ಮೀರಿಸುವ ಲಕ್ಷಣ ಗೋಚರಿಸುತ್ತಿದೆ.ಬೆಂಗಳೂರಿನಲ್ಲಿ ಝೀರೋ ಟ್ರಾಫಿಕ್ ಬೇಡ ಅಂದ ಡಿಸಿಎಂ ಚಿಕ್ಕಮಗಳೂರಿನಲ್ಲಿ ಇದೀಗ ಝೀರೋ ಟ್ರಾಫಿಕ್ ಬಳಸಿದ್ದಾರೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಆದರೂ ಡಿಸಿಎಂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ನಾನು ಜನರ ನಡುವೆ ಇರುತ್ತೇನೆ. ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟಿದ್ದ ಅಶ್ವಥ್ ನಾರಾಯಣ ನುಡಿದಂತೆ ನಡೆದಿಲ್ಲ.
Discussion about this post