ಮಂಡ್ಯದ ಸ್ವಾಭಿಮಾನಿ ಸಮಾವೇಶದಲ್ಲಿ ಕಳೆದ ಹಲವು ವಾರಗಳಿಂದ ಹಿಡಿದಿಟ್ಟುಕೊಂಡಿದ್ದ ಆಕ್ರೋಶವನ್ನು ದರ್ಶನ್ ಹೊರ ಹಾಕಿದ್ದಾರೆ.
ಇಷ್ಟು ದಿನಗಳ ಕಾಲ ದಳಪತಿಗಳ ಟೀಕೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದ ದರ್ಶನ್ ಇಂದು ದಳಪತಿಗಳು ಎತ್ತಿದ ಎಲ್ಲಾ ಪ್ರಶ್ನೆಗಳಿಗೆ, ಮಾಡಿದ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಸಿಎಂ ಕುಮಾರಸ್ವಾಮಿಯವರನ್ನು ಮಾತಿನುದ್ದಕ್ಕೂ ತರಾಟೆಗೆ ತೆಗೆದುಕೊಂಡ ದರ್ಶನ್, ಅವರಿಗೆ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.
“ ನಾನು ಇವತ್ತು ನಿಜವಾಗ್ಲೂ ಕುಮಾರಸ್ವಾಮಿಯವರಿಗೆ ತುಂಬಾ ಥ್ಯಾಂಕ್ಸ್ ಹೇಳ್ತಿನಿ. ನೂರು ಜನ ನಿಂತಿದ್ರೆ 10 ಜನ ಡಿ ಬಾಸ್ ಅನ್ನೋರು. ಇವತ್ತು ಇಡೀ ಕರ್ನಾಟಕ್ಕೆ ಹೇಳಿಕೊಟ್ಟಿದ್ದು ಅವರು. ಅದಕ್ಕಾಗಿ ಅವರಿಗೆ ಥ್ಯಾಂಕ್ಸ್ ಹೇಳ್ತಿನಿ”.
ನಾವು ಪೆರೇಡ್ ಮಾಡ್ತೀವಿ ಎಂದು ನಿರ್ಧರಿಸಿ ಬಂದಿದ್ದೆವು. ಪೆರೆಡೇ ಮಾಡಿದ್ದೇವೆ. ಇನ್ನು ಅಮ್ಮನನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಸುಮಲತಾ ಅವರನ್ನ ಗೆಲ್ಲಿಸಿದ್ರೆ ಇಡೀ ಇಂಡಿಯಾ ಅಲ್ಲ ವಿಶ್ವ ತಿರುಗಿ ನೋಡುತ್ತದೆ. ಹೀಗಾಗಿ ಯೋಧರ ತರ ಕೆಲಸ ಮಾಡಿ, ಬೂತ್ ಕಾಯ್ದುಗೊಳ್ಳಿ ಎಂದು ಮನವಿ ಮಾಡಿದರು.
ಒಂದು ಜೊತೆ ಜೋಡೆತ್ತಿಗೆ ಒಂದೂವರೆ ಲಕ್ಷ. ಒಳ್ಳೆ ಹಾಲು ಕರೆಯುವ ಹಸುವಿಗೆ 75 ರಿಂದ 80 ಸಾವಿರ. ಒಂದೊಳ್ಳೆ ಕುರಿ ತರ್ತೀನಿ ಅಂದ್ರೆ 15 ರಿಂದ 20 ಸಾವಿರ ರೂಪಾಯಿ. ಪ್ರೀತಿಯಿಂದ ನಾಯಿ ಸಾಕ್ತೀನಿ ಅಂದ್ರುನೂ 5 ಸಾವಿರ ರೂಪಾಯಿ. ನಾವು ಐನೂರು ಹಾಗೂ ಸಾವಿರಕ್ಕೆ ನಮ್ಮನ್ನ ಮಾರಿಕೊಂಡು ಬಿಟ್ಟರೆ ಹೇಗೆ..? ಅನ್ನುವ ಮೂಲಕ ನೋಟಿಗಾಗಿ ವೋಟು ಹಾಕಬೇಡಿ ಅಂದರು.
Discussion about this post