ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗುತ್ತಿದ್ದಂತೆ, ಸೋಂಕು ತಡೆಗೆ ಇನ್ನಿಲ್ಲದ ಸರ್ಕಸ್ ಪ್ರಾರಂಭಗಂಡಿದೆ. ಕೊರೋನಾ ಸೋಂಕಿತರ ಚಿಕಿತ್ಸೆಗೂ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎರಡನೇ ಅಲೆಯ ಅನಾಹುತ ಮರುಕಳಿಸದಿರಲಿ ಎಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ನಡುವೆ ಸೋಂಕು ಹೆಚ್ಚಾಗುತ್ತಿರುವ ಕಾರಣ BBMP ಮುಂಜಾಗ್ರತ ಕ್ರಮವಾಗಿ ಬೆಂಗಳೂರಿನ 13 ವಿದ್ಯುತ್ ಚಿತಾಗಾರಗಳನ್ನು ಸಜ್ಜುಗೊಳಿಸಲಾರಂಭಿಸಿದೆ. ಎಲ್ಲಾ ಚಿತಾಗಾರಗಳಿಗೆ ವಿದ್ಯುತ್ ಪೂರೈಕೆ ಮತ್ತು ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳನ್ನು ಕೂಡಾ ಮಾಡಲಾಗುತ್ತಿದೆ.
ಎರಡನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ಸಿಕ್ಕಾಪಟ್ಟೆ ಜನ ಬಲಿಯಾಗಿದ್ದರು. ಶವಾಗಾರಗಳಲ್ಲಿ ಅಂತ್ಯ ಸಂಸ್ಕಾರಕ್ಕೆಸರತಿ ಸಾಲು ಏರ್ಪಟ್ಟಿತ್ತು. ಹೀಗಾಗಿ ಅಂತಹ ಸಮಸ್ಯೆಯಾಗದಂತೆ ಈ ಬಾರಿ ಕ್ರಮ ಕೈಗೊಳ್ಳಲಾಗುತ್ತಿದೆ.

ಚಂಪಾ ಖ್ಯಾತಿಯ ಸಾಹಿತಿ ಚಂದ್ರಶೇಖಪ ಪಾಟೀಲ್ ಇನ್ನಿಲ್ಲ
ಬೆಂಗಳೂರು : ಚಂಪಾ ಎಂದೇ ಹೆಸರು ಗಳಿಸಿದ್ದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ (83) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕೋಣನಕುಂಟೆ ಆಸ್ಟ್ರಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗೋಕಾಕ್ ಚಳವಳಿಯಲ್ಲಿಯೂ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ ಚಂಪಾ ಸಂಕ್ರಮಣ ಅನ್ನುವ ಸಾಹಿತ್ಯ ಪತ್ರಿಕೆಯನ್ನು ಏಕಾಂಗಿಯಾಗಿ ಪ್ರಕಟಿಸುತ್ತಿದ್ದರು. ಮಾತ್ರವಲ್ಲದೆ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಚಂಪಾ ಕನ್ನಡ ಭಾಷೆಗೆ ಅನ್ಯಾಯವಾದ ಸಂದರ್ಭದಲ್ಲಿ ಸದಾ ದನಿ ಎತ್ತುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಪರಿಷತ್ ನ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದರು.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಮುತ್ತೂರಿನಲ್ಲಿ 1939 ಜೂನ್ 18ರಂದು ಜನಿಸಿದ್ದ ಚಂಪಾ ಅವರ ತಂದೆ ಬಸವರಾಜ್ ಹಿರೇಗೌಡರು, ತಾಯಿ ಮುರಿಗೆವ್ವ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ಪಡೆದ ಪಾಟೀಲರು, ತಂದೆಯವರ ಇಂಗ್ಲಿಷ್ ಅಭಿಮಾನದ ಕಾರಣ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದ್ದರು.
ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಚಂಪಾ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟ ಸಾಲು. ಇನ್ನು ಚಂಪಾ ಅವರ ಪಾರ್ಥಿವ ಶರೀರವನ್ನು ಎಲಚೇನಹಳ್ಳಿ ಮೆಟ್ರೋ ಸ್ಟೇಷನ್ ಜ್ಯೋತಿ ಶಾಲೆಯ ಪಕ್ಕದಲ್ಲೇ ಇರುವ ನಿವಾಸಕ್ಕೆ ಕೊಂಡೊಯ್ಯಲಾಗಿದೆ.
Discussion about this post