ನಟ ದರ್ಶನ್, ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ, ನಟ ಯಶ್, ದರ್ಶನ್ರನ್ನು ‘ಕಳ್ಳ ಎತ್ತುಗಳು’ ಎಂದು ಜರಿದ ಸಿಎಂ ಕುಮಾರಸ್ವಾಮಿ ಓಹೋ..! ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ ಬೆಳೆದ ಪೈರನ್ನು ಅರ್ಧ ರಾತ್ರಿ ತಿನ್ನುವ ಎತ್ತುಗಳು, ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ರು ಇವರಿಬ್ಬರು? ಅಮ್ಮನನ್ನು ಉಳಿಸಲು ಬಂದಿದ್ದಾರಲ್ಲ, ಅವರು ನೀರಲ್ಲಿ ಬಿದ್ದ ಶವ ತೆಗೆಯಲು ಬಂದಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಸರಿ ಅವರು ಬಂದಿಲ್ಲ, ನಿಖಿಲ್ ಕುಮಾರಸ್ವಾಮಿ ಇಷ್ಟೆಲ್ಲಾ ದುರ್ಘಟನೆಗಳು ನಡೆಯುವಾಗ ಎಲ್ಲಿದ್ದರು. ಅವರು ಯಾಕೆ ಬಂದಿಲ್ಲ ಅನ್ನುವುದು ಯಶ್, ದರ್ಶನ್ ಅಭಿಮಾನಿಗಳ ಪ್ರಶ್ನೆ.
Discussion about this post