ಕನ್ನಡ ಕಿರುತೆರೆಯಲ್ಲಿ ಚುಕ್ಕಿ ಎಂದೇ ಪ್ರಸಿದ್ಧರಾಗಿರುವ ಚಂದನಾ ಅನಂತ ಕೃಷ್ಣ ( Chandana Ananthakrishna ) ಮೂಲತ ರಂಗಭೂಮಿ ಕಲಾವಿದೆ. ತುಮಕೂರಿನವರಾದ ಇವರು ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಧಾರಾವಾಹಿಯಲ್ಲಿ ಚುಕ್ಕಿ ಪಾತ್ರದಿಂದ ಇವರು ಪ್ರಸಿದ್ಧಿ ಪಡೆದರು. ಹಲವು ನಾಟಕಗಳಲ್ಲಿ ಅಭಿನಯಿಸಿದ ಅನಂತಾ ಕೃಷ್ಣ ( Chandana Ananthakrishna )ಬಿಗ್ ಬಾಸ್ ಮನೆಗೆ ಹೋಗುವ ಮೂಲಕ ಮತ್ತಷ್ಟು ಪ್ರಸಿದ್ಧಿಯಾದರು.
ಬಿಗ್ ಬಾಸ್ ಮುಗಿಸಿ ಬಂದವರು ಡ್ಯಾನ್ಸಿಂಗ್ ಚಾಂಪಿಯನ್ ಮುಗಿದ ಬಳಿಕ ಬೇರೆಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಬ್ಯಾಕ್ ಟು ಬ್ಯಾಕ್ ಆಫರ್ ಗಳನ್ನು ಸ್ವೀಕರಿಸುತ್ತಿರುವ ಚಂದನಾ ಅನಂತಕೃಷ್ಣ ಕಿರುತೆರೆಗ ಕಂಬ್ಯಾಕ್ ಮಾಡಲಿದ್ದಾರೆ.
ಇದನ್ನೂ ಓದಿ : kho kho league : ಐಪಿಎಲ್ ಮಾದರಿಯಲ್ಲೇ ಖೋ ಖೋ ಲೀಗ್ : ದೇಶಿ ಕ್ರೀಡೆಗೆ ಹೈಟೆಕ್ ಸ್ಪರ್ಶ
ಹೌದು ಸ್ಟಾರ್ ಸುವರ್ಣ ವಾಹಿನಿಯ ಮುದ್ದು ಮಣಿಮಗಳು ಅನ್ನುವ ಸೀರಿಯಲ್ ಆಫರ್ ಪಡೆದಿರುವ ಚಂದನಾ ಸೃಷ್ಟಿಯಾಗಿ ಎಂಟ್ರಿ ಕೊಡಲಿದ್ದಾರೆ. ಈ ಮೂಲಕ ಸ್ಮಾಲ್ ಬ್ರೇಕ್ ಬಳಿಕ ಚಂದನಾ ಕಿರುತೆರೆಗ ಮರಳಿದ್ದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
Discussion about this post