ಯಾದಗಿರಿ : ಈ ಹಿಂದಿನ ಸಿಎಂ ಯಡಿಯೂರಪ್ಪ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ನನ್ನ ಸರ್ಕಾರ ಅನ್ನದಾತನ ಸರ್ಕಾರ ಅನ್ನುವ ಸಂದೇಶ ಸಾರಿದ್ದರು. ಮಾತ್ರವಲ್ಲದೆ ಮಾತು ಮಾತಿಗೂ ಅವರು ನಮ್ದು ರೈತ ಪರ ಸರಕಾರ ಅನ್ನುತ್ತಿದ್ದರು.
ಇದಾದ ಬಳಿಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರ ಮಕ್ಕಳಿಗೆ ಶಿಷ್ಯವೇತನ ಘೋಷಿಸುವ ಮೂಲಕ ಬನನ್ನ ಸರಕಾರವೂ ರೈತನ ಪರವಾಗಿದೆ ಅನ್ನುವ ಸಂದೇಶ ಕೊಟ್ಟಿದ್ದರು. ಆದರೆ ಇದೇ ರೈತ ಪರ ಸರಕ್ರಾ ಬೆಳೆ ನಷ್ಟದ ಪರಿಹಾರ ಬಂದಿಲ್ಲ ಎಂದು ಪ್ರಶ್ನಿಸಿದ ರೈತನ ಮೇಲೆಯೇ ಕೇಸ್ ಜಡಿದಿದೆ.
ಜುಲೈ 24 ರಂದು ಆಗ ಸಚಿವರಾಗಿದ್ದ ಆರ್ ಶಂಕರ್ ಯಾದಗಿರಿಯ ಶಹಾಪೂರ ತಾಲೂಕಿನ ಕೊಳ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ನೆರೆ ಹಾಗೂ ಅತಿವೃಷ್ಟಿಯಿಂದ ಆಗಿರುವ ಹಾನಿ ಸಲುವಾಗಿ ಸಚಿವರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ರೈತರೊಬ್ಬರು ಬೆಳೆ ನಷ್ಟದ ಪರಿಹಾರ ಬಂದಿಲ್ಲ ಎಂದು ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಕಾರಿದ್ದರು. ಈ ವೇಳೆ ಕಕ್ಕಾಬಿಕ್ಕಿಯಾದ ಸಚಿವ ಆರ್ ಶಂಕರ್, ಸಿಡಿಮಿಡಿಗೊಂಡಿದ್ದ ಘಟನೆಯೂ ನಡೆದಿತ್ತು.
ಇದಾದ ಬಳಿಕ ಇದೀಗ ಅಂದು ಆಕ್ರೋಶ ವ್ಯಕ್ತಪಡಿಸಿದ ಬಸಣ್ಣ ಭಂಗಿ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 1860, 504 ಕಲಂ ಅಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಒಬ್ಬ ರೈತ ತನ್ನ ಹಕ್ಕುಗಳಿಗಾಗಿ ಜನಪ್ರತಿನಿಧಿ, ಅಧಿಕಾರಿಗಳನ್ನು ಪ್ರಶ್ನಿಸಿದ್ರೆ FIR ದಾಖಲಿಸುತ್ತಾರೆ ಅನ್ನುವುದಾದ್ರೆ ಇನ್ನು ಮುಂದೆ ರೈತರ ಪರಿಸ್ಥಿತಿ ಹೇಗಿರಬಹುದು. ಇನ್ನು ಇಷ್ಟಕ್ಕೆ ಕಾರಣವಾಗಿರುವ ಆರ್ ಶಂಕರ್ ಅವರು ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ.
ಆದರೆ ಅಧಿಕಾರಿಗಳು ಹೇಳುವುದೇ ಬೇರೆ, ಬಸಣ್ಣ ಈಗಾಗಲೇ 2019ರ ಸಾಲಿನ ಬೆಳೆ ವಿಮೆಯ ಹಣವನ್ನು ಸ್ವೀಕರಿಸಿದ್ದಾರೆ. ಹಾಗಿದ್ದ ಮೇಲೂ ಸಚಿವರ ಮೇಲೆ ಎಗರಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಾಗಿದೆ ಅನ್ನುವುದು ಅಧಿಕಾರಿಗಳ ಪ್ರತಿಕ್ರಿಯೆ.
Discussion about this post