Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

boycott zee kannada : ಯಕ್ಷಗಾನಕ್ಕೆ ಅವಮಾನ : ಝೀ ಕನ್ನಡ ವಿರುದ್ಧ ದಾಖಲಾಯ್ತು ಪ್ರಕರಣ

ಕಡಲತಡಿ ಭಾರ್ಗವ ಶಿವರಾಮ ಕಾರಂತ ಹುಟ್ಟೂರಿನಲ್ಲೇ ದಾಖಲಾಗಿದೆ

Radhakrishna Anegundi by Radhakrishna Anegundi
July 26, 2022
in ರಾಜ್ಯ
insulting yakshagana zee-kannada-dkd6- police case in kota police station
Share on FacebookShare on TwitterWhatsAppTelegram

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ವಾಹಿನಿ ಗುರಿಯಾಗಿದ್ದು, ಈ ಬಾರಿ ಬಿಡುವ ಪ್ರಶ್ನೇಯೇ ಇಲ್ಲ ಅಂದಿದ್ದಾರೆ ಯಕ್ಷಗಾನದ ಅಭಿಮಾನಿಗಳು – boycott zee kannada

ಬೆಂಗಳೂರು :  ಈ ಬಾರಿ ಯಕ್ಷಗಾನಕ್ಕೆ ಝೀ ಕನ್ನಡದಿಂದ ಆಗಿರುವ ಅವಮಾನಕ್ಕೆ ತಕ್ಕ ಉತ್ತರ ನೀಡಲು ಯಕ್ಷಗಾನ ಅಭಿಮಾನಿಗಳು ನಿರ್ಧರಿಸಿದ್ದಾರೆ. ( boycott zee kannada) ಈ ಸಂಬಂಧ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದ್ದು, ರಾಜ್ಯದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ಯಕ್ಷಗಾನ ಪ್ರೇಮಿಗಳು ನಿರ್ಧರಿಸಿದ್ದಾರೆ.

ಈ ನಡುವೆ ಮೊದಲ ದೂರು ಕಡಲತಡಿ ಭಾರ್ಗವ ಶಿವರಾಮ ಕಾರಂತ ಹುಟ್ಟೂರಿನಲ್ಲೇ ದಾಖಲಾಗಿದೆ.( ಕಾರಂತರು ಯಕ್ಷಗಾನ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಅನ್ನುವುದು ಗಮನಾರ್ಹ ಅಂಶ.) ಉಡುಪಿ ಬ್ರಹ್ಮಾವರ ಕೋಟ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ಜೀ ಕನ್ನಡ ದೃಶ್ಯ ಮಾದ್ಯಮ ಸಂಸ್ಥೆಯು ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಕರಾವಳಿಯ ಶ್ರೀಮಂತ ಕಲಾ ಪ್ರಾಕಾರವಾದ ಯಕ್ಷಗಾನವನ್ನ ಸಿನಿಮಾದ ಸಂಗೀತದ ಜೊತೆಗೆ ಅತ್ಯಂತ ಅಶ್ಲೀಲವಾದ ಹಾವ-ಭಾವದಲ್ಲಿ ಪ್ರದರ್ಶಿಸಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ.

ಯಕ್ಷಗಾನವನ್ನ ನಾವೆಲ್ಲರೂ ಧಾರ್ಮಿಕ ಭಾವನೆಯಲ್ಲಿ ಬೆಳಕಿನ ಸೇವೆ ಎಂದೇ ಪೂಜ್ಯ ಭಾವದಲ್ಲಿ ಗೌರವಿಸುತ್ತೇವೆ. ಆದರೆ ಝೀ ದೃಶ್ಯವಾಹಿನಿ ಪ್ರತೀ ಸಾರಿಯೂ ಯಕ್ಷಗಾನವನ್ನು ವಿರೂಪಗೊಳಿಸಿ ಪ್ರದರ್ಶಿಸುತ್ತಾ ಹಿಂದೂ ಧಾರ್ಮಿಕ ಭಾವನೆಗೆ ನೋವನ್ನು ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಆ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಮತ್ತು ನೃತ್ಯ ಸಂಯೋಜಕ ಮಂಜು ಮಾಸ್ಟರ್ ಮತ್ತು ಸಂಬಂಧಪಟ್ಟವರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ನಮಗೆ ನ್ಯಾಯ ದೊರಕಿಸಿಕೊಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿ ಮಾಡಲಾಗಿದೆ. boycott zee kannada

yakshagana zee kannada police

Zee Kannada : ವೇದಿಕೆಯಲ್ಲಿ ಅಪಮಾನ : ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆಯಾಚನೆ

Zee Kannada ವಾಹಿನಿ ವೀಕ್ಷಕರ ಆಕ್ರೋಶಕ್ಕೆ ತುತ್ತಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಕರಾವಳಿಯನ್ನು ಕೆಣಕಿದ ಆರೋಪಕ್ಕೆ ಗುರಿಯಾಗಿತ್ತು.

ಬೆಂಗಳೂರು :  Zee Kannada ವಾಹಿನಿ ವಿರುದ್ಧ ಈ ಬಾರಿ ಕರಾವಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಿಯಾಲಿಟಿ ಶೋ ಒಂದರಲ್ಲಿ ಯಕ್ಷಗಾನವನ್ನು ಅವಮಾನಿಸಿರುವುದು ಕರಾವಳಿಗರಿಗೆ ನೋವು ತಂದಿದೆ. ಆರಾಧಾನ ಕಲೆಯಾಗಿರುವ ಯಕ್ಷಗಾನದ ಕಿರೀಟ, ಯಕ್ಷಗಾನದ ಗೆಜ್ಜೆ ಹೀಗೆ ಪ್ರತಿಯೊಂದು ವಸ್ತುವನ್ನೂ ಗೌರವದಿಂದ ಕಾಣಲಾಗುತ್ತದೆ. ಹಾಗಿರುವಾಗ ಯಕ್ಷಗಾನದ ವೇಷಭೂಷಣ ಧರಿಸಿ, ಅದೇ ಪ್ರಕಾರದಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ :Zameer Ahmed Khan : ಬಹಿರಂಗವಾಗಿ ಮಾತನಾಡುವಾಗ ಎಚ್ಚರವಿರಲಿ : ಜಮೀರ್ ಗೆ AICC ಕಡೆಯಿಂದಲೇ ಬಂತು ಎಚ್ಚರಿಕೆ

ಇನ್ನು ಯಕ್ಷಗಾನ ಕಲಿಯೋದು ಅಂದ್ರೆ ಅದೊಂದು ತಪ್ಪಸ್ಸು.ಹಾಗಿರುವ ಕಾರಣದಿಂದ ಸಹಜವಾಗಿಯೇ Zee Kannada ವಿರುದ್ಧ ಕರಾವಳಿ ಕೆಂಡವಾಗಿದೆ. ಈ ಹಿಂದೆಯೂ ಇದೇ ರೀತಿಯಲ್ಲಿ ಯಕ್ಷಗಾನಕ್ಕೆ ಅವಮಾನವಾಗಿತ್ತು. ಆಗ್ಲೂ ಕ್ಷಮೆ ಕೇಳಲಾಗಿತ್ತು. ಮತ್ತೆ ಅದೇ ತಪ್ಪು ಮಾಡಲಾಗಿತ್ತು. ಪದೇ ಪದೇ ತಪ್ಪು ಮಾಡುತ್ತಿರುವುದನ್ನು ಇದು ಉದ್ದೇಶಪೂರ್ವಕ ಅನ್ನುವುದು ಯಕ್ಷಗಾನ ಪ್ರೇಮಿಗಳ ಆಕ್ರೋಶ.

ಇದನ್ನೂ ಓದಿ : Suspected terrorist : ಸ್ವಿಗ್ಗಿ ಡೆಲಿವರಿ ಬಾಯ್ ಆಗಿದ್ದ ಶಂಕಿತ ಉಗ್ರನ ಸೆರೆ ಹಿಡಿದ ಸಿಸಿಬಿ

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ boycott zee kannada ಟ್ರೆಂಡ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವಾಹಿನಿ, ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕೆಲವರಿಗೆ ನೋವಾಗಿದೆ, ನೋವಾಗಿದ್ರೆ ಕ್ಷಮೆ ಇರಲಿ ಎಂದು ಕ್ಷಮೆಯನ್ನು ಕೇಳಿದೆ. ಆದರೆ ಯಕ್ಷಗಾನ ಪ್ರೇಮಿಗಳು ಈ ಕ್ಷಮೆಯನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ವೇದಿಕೆಯಲ್ಲಿ ಅವಮಾನಿಸುವ ನೀವು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳುವುದು ಹೊಸದೇನಲ್ಲ. ಎಲ್ಲಿ ಅವಮಾನ ಮಾಡಿದ್ದೀರೋ ಅಲ್ಲೇ ಕ್ಷಮೆ ಕೇಳಿ. ಹೀಗಾಗಿ ವೇದಿಕೆಯಲ್ಲಿ ಕ್ಷಮೆ ಕೇಳದ ಹೊರತು ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ :zameer ahmed : ಡಿಕೆಶಿಯೂ ಅಲ್ಲ ಸಿದ್ದುಗೂ ಇಲ್ಲ : ಮುಂದಿನ ಸಿಎಂ ಜಮೀರ್ ಅಹಮ್ಮದ್

ಈ ಬಾರಿ ಝೀ ಕನ್ನಡದ ವಿರುದ್ಧ ಕಾನೂನು ಹೋರಾಟಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸೇರಿದಂತೆ ಹಲವಾರು ಯಕ್ಷಗಾನ ಸಂಘಟನೆಗಳು ನಿರ್ಧರಿಸಿದೆ. ಜೊತೆಗೆ ಹಲವಾರು ಸೆಲೆಬ್ರೆಟಿ ಯಕ್ಷಗಾನ ಕಲಾವಿದರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

Tags: MAIN
ShareTweetSendShare

Discussion about this post

Related News

nikhil kumaraswamy Karnataka polls Nikhil to contest from Ramanagara

Nikhil kumaraswamy:ಮಂಡ್ಯಕ್ಕೆ ಕೈ ಕೊಟ್ಟ ನಿಖಿಲ್ : ರಾಮನಗರದಿಂದ ಕುಮಾರಸ್ವಾಮಿ ಪುತ್ರ ಕಣಕ್ಕೆ

zika virus First case detected in Karnataka Health Minister

Zika Virus  : ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್‌ ಪತ್ತೆ : ಖಚಿತಪಡಿಸಿದ ಸಚಿವ : ರಾಜ್ಯದಲ್ಲಿ ಆತಂಕ

Shashi Kumar BJP  : ಚಿತ್ರನಟ ಶಶಿಕುಮಾರ್ ಬಿಜೆಪಿಗೆ :  ಸೋಲಿನ ಭೀತಿಯ ಪಕ್ಷಕ್ಕೆ ಪಕ್ಷಾಂತರಿ ಎಕ್ಸ್ ಪರ್ಟ್

lokayukta : ಮೊದಲು ಎಸಿಬಿ ಈಗ ಲೋಕಾಯುಕ್ತ : ಬೆಸ್ಕಾಂ ಎಇ ತಿಂದು ತೇಗಿದೆಷ್ಟು..?

praveen nettar : ನೆಟ್ಟಾರು ಪತ್ನಿಗೆ ಸಿಎಂ ಕಚೇರಿಯಲ್ಲಿ ಉದ್ಯೋಗ : ಆಕ್ರೋಶ ಶಮನಕ್ಕೆ ಕಣ್ಣೊರೆಸುವ ತಂತ್ರ

Karnataka Politics : ಕಟೀಲ್ ವಿದೂಷಕ : ಸಿದ್ದರಾಮಯ್ಯ ನರಹಂತಕ : ಪಾವನವಾಯ್ತು ಕರ್ನಾಟಕ

BJP Meeting : ಕಾಂಗ್ರೆಸ್ ಗೆ ತನಿಖೆ ಬೆದರಿಕೆ : ಕೈ ನಾಯಕರ ಬಾಯಿ ಮುಚ್ಚಿಸಲು ಬಿಜೆಪಿ ಹೊಸ ನಾಟಕ

Murugha Shree Arrest : ಕೊನೆಗೂ 6 ದಿನಗಳ ಬಳಿಕ ಮುರುಘಾ ಶ್ರೀಗಳನ್ನು ವಶಕ್ಕೆ ಪಡೆದ ಪೊಲೀಸರು

Muddahanume gowda : ಇದಪ್ಪ ರಾಜೀನಾಮೆ ಅಂದ್ರೆ : ಗೌರವಯುತವಾಗಿ ಕಾಂಗ್ರೆಸ್ ನಿಂದ ಹೊರ ಬರಲು ನಿರ್ಧರಿಸಿದ ಮುದ್ದಹನುಮೇ ಗೌಡ

Pramod muthalik :ಎಡಿಜಿಪಿ ಅಲೋಕ್ ಕುಮಾರ್ ಅವರೇ ಕ್ಷಮೆ ಕೇಳಿ : ಮುತಾಲಿಕ್ ಆಗ್ರಹದ ಕಾರಣ ಗೊತ್ತಾ…?

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್