ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇದೀಗ ಸರ್ಕಾರದ ಬೊಕ್ಕಸಕ್ಕೆ ಬಿಳಿಯಾನೆಯಾಗಿ ಪರಿಣಮಿಸಿದೆ. ಇಲಾಖೆ ನಿರ್ವಹಿಸಲು ಬಂದ ಅಧಿಕಾರಿಗಳು ಮತ್ತು ಸಚಿವರು ದೂರದೃಷ್ಟಿ ಹೊಂದಿರದ ಕಾರಣದಿಂದ ಬಿಎಂಟಿಸಿ ಸಂಕಷ್ಟಕ್ಕೆ ಸಿಲುಕಿದೆ.
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನುವಂತೆ ಪ್ರಚಾರದ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಬಿಎಂಟಿಸಿಯಲ್ಲಿ ಘೋಷಿಸಲಾಯ್ತೇ ಹೊರತು, ಭವಿಷ್ಯದ ದೃಷ್ಟಿಯಿಂದ ಸಂಸ್ಥೆಯನ್ನು ಆರ್ಥಿಕವಾಗಿ ಬಲಗೊಳಿಸುವ ಕುರಿತಂತೆ ಯಾರೊಬ್ಬರೂ ಚಿಂತಿಸಲಿಲ್ಲ.
ಇದಕ್ಕೊಂದು ನಿದರ್ಶನ ಕಳೆದೊಂದು ವರ್ಷದಿಂದ ಬಿಎಂಟಿಸಿ ತನ್ನ ನೌಕರರ ಭವಿಷ್ಯ ನಿಧಿ ಹಣವನ್ನು ಬಾಕಿ ಇರಿಸಿಕೊಂಡಿದೆ. 310 ಕೋಟಿಗಳಷ್ಟು ಮೊತ್ತವನ್ನು ಬಿಎಂಟಿಸಿ ಪಾವತಿಸಬೇಕಾಗಿದ್ದು, ನಿವೃತ ನೌಕರರು ಸಕಾಲದಲ್ಲಿ ಪಿಎಫ್ ಹಣ ಸಿಗದೆ ಪರದಾಡುವಂತಾಗಿದೆ.
2018ರ ಜುಲೈನಿಂದ 2019ರ ಆಗಸ್ಟ್ ವರೆಗಿನ ಪಿಎಫ್ ನಿಧಿಯನ್ನು ಬಿಎಂಟಿಸಿ ಬಾಕಿ ಇರಿಸಿಕೊಂಡಿದೆ. ಪಿಎಫ್ ಮೊತ್ತವನ್ನು ನಿಗಮದ ಅನ್ಯ ಕೆಲಸಕ್ಕೆ ಬಳಸಿದ ಕಾರಣ ಈ ಸಮಸ್ಯೆ ಎದುರಾಗಿದೆ.ಜೊತೆಗೆ ನಿಗಮ ಕಳೆದ ನಾಲ್ಕೈದು ವರ್ಷಗಳಿಂದ ನಷ್ಟ ಅನುಭವಿಸುತ್ತಿದೆ ಅನ್ನುವುದನ್ನು ಮರೆಯುವಂತಿಲ್ಲ.
<a href="http://” target=”_blank” rel=”noreferrer noopener” aria-label=”ಮನೆಯನ್ನು ಧೂಳು ಮುಕ್ತವಾಗಿಸುವ ರಹಸ್ಯ – ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ (opens in a new tab)”>ಮನೆಯನ್ನು ಧೂಳು ಮುಕ್ತವಾಗಿಸುವ ರಹಸ್ಯ – ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ದಕ್ಷ ಮತ್ತು ದೂರದೃಷ್ಟಿ ಹೊಂದಿರುವ ಸಚಿವರೊಬ್ಬರು ಇಲಾಖೆಯ ಜವಾಬ್ದಾರಿ ವಹಿಸಿಕೊಂಡರೆ ಬಿಎಂಟಿಸಿಯನ್ನು ಲಾಭದ ಹಾದಿಗೆ ತರುವುದು ಕಷ್ಟದ ಮಾತೇನಲ್ಲ.
Discussion about this post