ಬೆಂಗಳೂರು : ಮುಖ್ಯಮಂತ್ರಿಯಾಗಿದ್ದವರು ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿ ಸ್ಥಾನ ಒಪ್ಪಿಕೊಂಡಾಗಲೇ ಜನರ ಅಸಮಾಧಾನಕ್ಕೆ ಜಗದೀಶ್ ಶೆಟ್ಟರ್ ತುತ್ತಾಗಿದ್ದರು. ಒಂದ್ಸಲ ಮುಖ್ಯಮಂತ್ರಿಯಾದ ಮೇಲೆ ಅದರ ಘಟನೆ ಗೌರವ ಉಳಿಸಿಕೊಳ್ಳುವ ಸಲುವಾಗಿ ಹೊಸ ಮುಖಗಳಿಗೆ ಸಚಿವರಾಗಲು ಅವಕಾಶ ಕೊಡಬೇಕಿತ್ತು. ಆದರೆ ಶೆಟ್ಟರ್ ಹಾಗೇ ಮಾಡಿರಲಿಲ್ಲ.
ಆದರೆ ಇದೀಗ ಬೊಮ್ಮಾಯಿ ಸಂಪುಟದಲ್ಲಿ ನಾನು ಮಂತ್ರಿಯಾಗುವುದಿಲ್ಲ ಎಂದು ಬಹಿರಂಗವಾಗಿ ಸಾರುವ ಮೂಲಕ ಪಕ್ಷದಲ್ಲಿ ವಲಸಿಗರ ಪ್ರಾಬಲ್ಯ ಹೆಚ್ಚಾಗುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೇ ನೋಡಿದರೆ ಸಂಪುಟ ಸೇರುವುದಿಲ್ಲ ಅನ್ನುವುದು ಬಿಜೆಪಿ ಕಚೇರಿಯ ನಾಲ್ಕು ಗೋಡೆಗಳ ಬಗ್ಗೆ ನಡೆಯಬೇಕಾದ ಚರ್ಚೆ, ಅದನ್ನು ಬಹಿರಂಗವಾಗಿ ಹೇಳಿರುವುದು ಬಿಜೆಪಿಗೆ ಇದೀಗ ಮುಜುಗರ ತಂದಿಟ್ಟಿದೆ.
ಇನ್ನು ತಮ್ಮ ಈ ನಿರ್ಧಾರಕ್ಕೆ ಕಾರಣ ಕೊಟ್ಟಿರುವ ಅವರು ನಾನು ಮಾಜಿ ಸಿಎಂ ಹಾಗೂ ಹಿರಿಯನಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಅಂದಿದ್ದಾರೆ. ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿರುವ ನಾನು, ಕೆಳ ಮಟ್ಟದಿಂದ ಮೇಲಿನ ಮಟ್ಟದ ತನಕ ಕೆಲಸ ಮಾಡಿದ್ದೇನೆ. ಮುಂದೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಬಯಸಿದ್ದೇನೆ ಅಂದಿದ್ದಾರೆ. ಇದೇ ವೇಳೆ ನಳಿನ್ ಆಡಿಯೋಗೂ ನನ್ನ ನಿರ್ಧಾರಕ್ಕೂ ಸಂಬಂಧವಿಲ್ಲ ಅಂದಿರುವ ಶೆಟ್ಟರ್ ಈ ನಿರ್ಧಾರವನ್ನು ಬೊಮ್ಮಾಯಿ ಹಾಗೂ ಯಡಿಯೂರಪ್ಪ ಗಮನಕ್ಕೆ ತಂದಿದ್ದೇನೆ ಅಂದಿದ್ದಾರೆ.
ಹಾಗೇ ನೋಡಿದರೆ ಇವೆಲ್ಲವೂ ಕೂಡಾ, ಮಾಮೂಲಿ ಹೇಳಿಕೆ, ಇನ್ ಸೈಡ್ ಸ್ಟೋರಿಯನ್ನು ಕೆದಕ್ರಿದೆ ಬೇರೆಯದ್ದೇ ಮಾಹಿತಿಗಳು ಸಿಕ್ಕಿದೆ. 2004 ರಲ್ಲಿ ಇದೇ ಬೊಮ್ಮಾಯಿ ಅವರನ್ನು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸೋಲಿಸಿದ್ದರು.
2008ರಲ್ಲಿ ಬೊಮ್ಮಾಯಿ ಬಿಜೆಪಿಗೆ ಸೇರಿದಾಗ, ಅವರಿಗೆ ಬಲವಾದ ನೆಲಯೊಂದರ ಅಗತ್ಯವಿತ್ತು. ಅನಂತ್ ಕುಮಾರ್ ಕಡೆ ಹೋಗೋಣ ಅಂದ್ರೆ ಆ ಪಾಳಯದಲ್ಲಿ ಶೆಟ್ಟರ್ ಕೂತಿದ್ರು, ಹೀಗಾಗಿ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡ ಬೊಮ್ಮಾಯಿ ಈಗ್ಲೂ ಆ ನಿಷ್ಠೆ ಉಳಿಸಿಕೊಂಡಿದ್ದಾರೆ. ಹಾಗಂತ 2012ರಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಬೊಮ್ಮಾಯಿ ಬಿಜೆಪಿಯಲ್ಲೇ ಉಳಿದುಕೊಂಡು ಜಾಣತನ ಪ್ರದರ್ಶಿಸಿದ್ದರು.
ಇನ್ನು ತನಗಿಂತ ಕಿರಿಯವನಾದ ಸಂಪುಟದಲ್ಲಿ ಹಿರಿಯವನಾದ ನಾನು ಮಂತ್ರಿ ಆದ್ರೆ ಹೇಗೆ ಅನ್ನುವುದು ಶೆಟ್ಟರ್ ಪ್ರಶ್ನೆಯಂತೆ. ಜೊತೆಗೆ ನನ್ನ ವಿರುದ್ಧವೇ ಸ್ಪರ್ಧಿಸಿದವರು ಬೊಮ್ಮಾಯಿ, ಇದೀಗ ಕಾಲ ಬದಲಾಗಿರಬಹುದು, ಹಾಗಂತ ಅವತ್ತಿನ ಚುನಾವಣೆಯ ಘಳಿಗೆ ಮರೆಯಲು ಸಾಧ್ಯವೇ ಎಂದು ಶೆಟ್ಟರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
Discussion about this post