ಬೆಂಗಳೂರು : ಚಕ್ರವರ್ತಿ ಸೂಲಿಬೆಲೆ ಮಾಡಿರುವ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಹಾಗೆ ನೋಡಿದರೆ ಚಕ್ರವರ್ತಿ ಸೂಲೆಬೆಲೆಯವರ ಘನತೆಗೆ ಈ ಟ್ವೀಟ್ ಶೋಭೆಯನ್ನು ಕೂಡಾ ತರೋದಿಲ್ಲ. ಜೊತೆಗೆ ಅಲ್ಲಿ ಬಳಸಿರುವ ಭಾಷೆಯೂ ಕೂಡಾ ಸೂಲಿಬೆಲೆಯವರ ಸ್ಥಾನಕ್ಕೆ ಸೂಕ್ತವಾಗಿಲ್ಲ.
ಮೀಲಾದುನ್ನಬಿ ಅಂಗವಾಗಿ ಆಯೋಜಿಸಲಾಗಿದ್ದ ರ್ಯಾಲಿಯ ವೀಡಿಯೊ ಅನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು ಕುರಿಗಳು ಹಿಂಡಾಗಿ ನಡೆಯುವಾಗ ಯಾವುದೇ ಭಯ ಇಲ್ಲದೆ, ಸಿಂಹ ಏಕಾಂಗಿಯಾಗಿಯೇ ಹೆಜ್ಜೆ ಹಾಕುತ್ತಿದೆ ಅಂದಿದ್ದಾರೆ.
ಹಸಿರು ಧ್ವಜದೊಂದಿಗೆ ಮೀಲಾದುನ್ನಬಿ ಮೆರವಣೆಗೆ ಸಾಗುತ್ತಿದ್ರೆ ಪಕ್ಕದಲ್ಲೇ ಬಾಲಕನೊಬ್ಬ ಕೇಸರಿ ಧ್ವಜ ಬೀಸುತ್ತಾ ನಿಂತಿದ್ದ. ಇದೇ ವಿಡಿಯೋವನ್ನು ಪಾಸಿಟಿವ್ ದೃಷ್ಟಿ ಕೋನದಲ್ಲೂ ನೋಡಬಹುದಿತ್ತು.
Don’t be afraid of being outnumbered. A lion walks alone while sheep with a herd!
— Chakravarty Sulibele (@astitvam) October 20, 2021
🙇♂️ pic.twitter.com/eTEkp1tCkO
ಇನ್ನು ಈ ಟ್ವೀಟ್ ಗೆ ಸೂಲಿಬೆಲೆ ಬೆಂಬಲಿಗರು ಬೆಂಬಲಿಸಿದ್ದಾರೆ. ಮತ್ತೆ ಕೆಲವರು ಸೂಲಿಬೆಲೆ ವರ್ತನೆಯನ್ನು ಟೀಕಿಸಿದ್ದಾರೆ. ಅದರಲ್ಲೂ ಪ್ರತಿಕ್ರಿಯಿಸಿರುವ, ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೂಲಿಬೆಲೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ,”ಮುಗ್ಧ ಮಕ್ಕಳನ್ನು ಪ್ರಚೋದನೆಗೆ ಬಳಸಬಾರದು. ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ನೀವು ಒಬ್ಬ ಐಕಾನ್, ದಯವಿಟ್ಟು ಧನಾತ್ಮಕ ಪದಗಳನ್ನೇ ಹಾಕಿ” ಅಂದಿದ್ದಾರೆ.
poor innocent children should not be used for provoking… what message do you want to convey..you are an icon .. please put positive words
— Bhaskar Rao (@deepolice12) October 20, 2021
Discussion about this post