ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯದಲ್ಲಿ ತಪ್ಪುಗಳ ರಾಶಿ ಇತ್ತು. ಆಗ ಯಾರೊಬ್ಬರೂ ಚರಾವೆತ್ತಿರಲಿಲ್ಲ. ಈಗ ಎಡಪಂಥೀಯರು ಚಕಾರವೆತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ
ಬೆಂಗಳೂರು : ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರಚಿಸಿದ್ದ ಪಠ್ಯಪುಸ್ತಕದ ವಿರುದ್ಧ ಹೋರಾಟ ಪ್ರಾರಂಭಿಸಿದ್ದ ಸ್ವಯಂ ಘೋಷಿತ ಹೋರಾಟಗಾರರಿಗೆ ರಾಜ್ಯ ಸರ್ಕಾರ ತಿರುಗೇಟು ನೀಡಿದೆ. ಬರಗೂರು ಪಠ್ಯಕ್ಕೆ ಸೆಡ್ಡು ಹೊಡೆದಿರುವ ಸರ್ಕಾರ, ಸಿದ್ದು ಅವಧಿಯ ಎಡವಟ್ಟುಗಳ ಪಟ್ಟಿ ಬಿಡುಗಡೆ ಮಾಡಿದೆ. ಜೊತೆಗೆ ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದೆ. ಈ ಮೂಲಕ ರಾಜಕೀಯ ಪ್ರೇರಿತ ಪಠ್ಯ ಪುಸ್ತಕ ಹೋರಾಟಗಾರರಿಗೆ ಮುಖಭಂಗವಾಗಿದೆ.
ಬೆಂಗಳೂರಿನಲ್ಲಿ ಈ ಸಂಬಂಧ ಮಾತನಾಡಿರುವ ಕಂದಾಯ ಸಚಿವ ಆರ್ ಅಶೋಕ್, ಚಕ್ರತೀರ್ಥ ಸಮಿತಿಯಿಂದ ಏಳೆಂಟು ದೋಷಗಳಾಗಿವೆ. ಅವುಗಳನ್ನು ಸರಿಪಡಿಸಿ ಹತ್ತು ದಿನಗಳಲ್ಲಿ ಹೊಸ ಪಠ್ಯಗಳನ್ನು ಶಾಲೆಗಳಿಗೆ ರವಾನಿಸಲಾಗುವುದು. ಹಾಗಂತ ಯಾವುದೇ ಕಾರಣಕ್ಕೂ ಪಠ್ಯ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಅಂದಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ ಪಠ್ಯ ಪರಿಷ್ಕರಣೆಯಲ್ಲಿ 150ಕ್ಕೂ ಹೆಚ್ಚು ದೋಷಗಳಿತ್ತು. ಹಾಗಿದ್ದರೂ ಅವರು ಅದನ್ನು ತಿದ್ದುಪಡಿ ಮಾಡುವ ಗೋಜಿಗೆ ಸಿದ್ದರಾಮಯ್ಯ ಸರ್ಕಾರ ಹೋಗಲಿಲ್ಲ. ಬದಲಾಗಿ ಅದೇ ತಪ್ಪುಗಳಿಂದ ಕೂಡಿದ ಪಠ್ಯವನ್ನೇ ಶಾಲೆಗೆ ಕಳುಹಿಸಿದರು ಎಂದು ಆಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಮಾತ್ರವಲ್ಲದೆ ಬರಗೂರು ಸಮಿತಿಯಿಂದ ಅಷ್ಟೆಲ್ಲಾ ತಪ್ಪುಗಳಾಗಿದ್ದರೂ, ಆಗ ಯಾರೊಬ್ಬರೂ ದನಿ ಎತ್ತಲಿಲ್ಲ. ಅಲ್ಪಸಂಖ್ಯಾತರನ್ನು ಓಲೈಸಿ, ಹಿಂದೂಗಳನ್ನು ಕೀಳಾಗಿ ತೋರಿಸಿದ್ದರೂ ಯಾರೊಬ್ಬರೂ ಪ್ರತಿಭಟನೆ ನಡೆಸಲಿಲ್ಲ ಎಂದು ಹೋರಾಟಗಾರರನ್ನು ತಿವಿದಿದ್ದಾರೆ.
Discussion about this post