ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗುತ್ತಿದೆ. ಹೀಗಾಗಿ ಮಾಸ್ಕ್ ಕಡ್ಡಾಯಕ್ಕೆ ನಿರ್ಧರಿಸಲಾಗಿದೆ
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಲಾರಂಭಿಸಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜನರ ಸಹಕಾರ ಮುಖ್ಯವಾಗಿದೆ. ಆದರೆ ದಯವಿಟ್ಟು ಮಾಸ್ಕ್ ಹಾಕಿ ಅನ್ನುವ ಮನವಿಗೆ ಜನ ಕ್ಯಾರೇ ಅಂದಿಲ್ಲ. ಹೀಗಾಗಿ ಮಾಸ್ಕ್ ಇಲ್ಲದೆ ಓಡಾಡುವವರ ವಿರುದ್ಧ ದಂಡದ ಅಸ್ತ್ರ ಪ್ರಯೋಗಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಈಗಾಗಲೇ ದಂಡ ಪ್ರಯೋಗಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಆರೋಗ್ಯ ಇಲಾಖೆ ಪ್ರಸ್ತಾಪ ಸಲ್ಲಿಸಿದೆ. ಈ ಹಿಂದೆ ಇದ್ದ ದಂಡ ಆದೇಶ ರದ್ದುಗೊಂಡಿರುವ ಕಾರಣ ಹೊಸದಾಗಿ ಆದೇಶ ಹೊರಡಿಸಬೇಕಾಗಿದೆ. ಆರೋಗ್ಯ ಇಲಾಖೆ ಪ್ರಸ್ತಾಪಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸುವ ಸಾಧ್ಯತೆಗಳಿದ್ದು, ಕೊರೋನಾ ನಿಯಂತ್ರಣ ಸಮಿತಿ ಕೂಡಾ, ಜನರ ನಿರ್ಲಕ್ಷ್ಯವನ್ನು ಪರಿಗಣಿಸಿ ದಂಡ ಅನಿವಾರ್ಯ ಅಂದಿದೆ.
ಈಗಾಗಲೇ ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಶೇ5ನ್ನು ದಾಟಿದ್ದು, ಪ್ರತೀ ನಿತ್ಯ ಒಂದು ಸಾವಿರ ಪ್ರಕರಣಗಳು ವರದಿಯಾಗುತ್ತಿದೆ. ಇನ್ನು ಮಾಲ್, ಮಾರುಕಟ್ಟೆ, ಬಾರ್, ಪಬ್ ಗಳಲ್ಲಿ ಜನ ಕೊರೋನಾ ಸೋಂಕು ಅನ್ನೋದು ಇದೆ ಅನ್ನುವುದನ್ನೇ ಮರೆತಿದ್ದಾರೆ. ಮೊನ್ನೆ ಮೊನ್ನೆ ನಾಗಸಂದ್ರ ಸಮೀಪ ಪ್ರಾರಂಭಗೊಂಡ ಐಕಿಯಾ ಮಾಲ್ ಪರಿಸ್ಥಿತಿ ನೋಡಿದರೆ ಸೂಪರ್ ಸ್ರ್ಪೆಡರ್ ಜಾಗದ ರೀತಿಯಲ್ಲಿ ಕಾಣಿಸುತ್ತಿದೆ. ಕಾಂಗ್ರೆಸ್ ಸಮಾವೇಶದಿಂದ ಕೊರೋನಾ ಹರಡುತ್ತದೆ ಅನ್ನುತ್ತಿದ್ದ ಆರೋಗ್ಯ ಸಚಿವ ಸುಧಾಕರ್ ಕಣ್ಣಿಗೆ ಐಕಿಯಾ ಮಾಲ್ ನಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ್ದು ಕಾಣಿಸದೇ ಇರುವುದು ದುರುಂತವೇ ಸರಿ.
Discussion about this post