ಬೆಂಗಳೂರು : ರಾಜ್ಯದ ರಸ್ತೆಗಳು ನಿರ್ವಹಣೆ ಇಲ್ಲದ ಕಾರಣದಿಂದ ಗುಂಡಿ ಬಿದ್ದಿದೆ. ಗುತ್ತಿಗೆದಾರರು ತಿಂದು ಉಂಡು ತೇಗಿರುವ ಕಾರಣದಿಂದ ಜನರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಇನ್ನು ಜನಪ್ರತಿನಿಧಿಗಳು ಶೀಘ್ರದಲ್ಲೇ ಯಾವುದೇ ಚುನಾವಣೆ ಇಲ್ಲ, ಸುಮ್ನೆ ತಲೆ ಕೆಡಿಸಿಕೊಳ್ಳುವುದ್ಯಾಕೆ ಎಂದು ಮೌನ ವೃತದಲ್ಲಿದ್ದಾರೆ.
![protest1](https://torrentspree.com/wp-content/uploads/2021/09/protest1.jpg)
ಈ ನಡುವೆ ಕೆರೆಯಂತಾಗಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಬೆಂಗಳೂರು ಅಂಜನಾಪುರ ಬಡಾವಣೆ ನಿವಾಸಿಗಳು ವಿನೂತನ ಪ್ರತಿಭಟನೆಗೆ ನಡೆಸಿದ್ದಾರೆ. ನೀರು ತುಂಬಿರುವ ರಸ್ತೆಯಲ್ಲಿ ತೆಪ್ಪದಲ್ಲಿ ಕೂತು, ಭತ್ತ ನಾಟಿ ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
![protest2](https://torrentspree.com/wp-content/uploads/2021/09/protest2.jpg)
ಇನ್ನು ಸ್ಥಳೀಯರು ಹೇಳುವ ಪ್ರಕಾರ ಕಳೆದ 12 ವರ್ಷಗಳಿಂದ ಈ ರಸ್ತೆ ದುರಸ್ಥಿ ಭಾಗ್ಯವನ್ನೇ ಕಂಡಿಲ್ಲವಂತೆ. ಹೀಗಾಗಿ ಕನಕಪುರ ಬನ್ನೇರುಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ಕೊಂಡಿಯಾದ ಅಂಜನಾಪುರ ರಸ್ತೆಯಲ್ಲಿ ಓಡಾಡುವವರು ಸೊಂಟ ಮುರಿದುಕೊಳ್ಳುವಂತಾಗಿದೆ.
![protest3](https://torrentspree.com/wp-content/uploads/2021/09/protest3.jpg)
Discussion about this post