ಉತ್ತರ ಕನ್ನಡ, ಉಡುಪಿ ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಇಂದು ಆಗಮಿಸಲಿದ್ದಾರೆ.
ಹೇಳಿ ಕೇಳಿ ಮಂಗಳೂರು ಬಿಜೆಪಿಯ ಭದ್ರಕೋಟೆ, ಹೀಗಾಗಿ ಲಕ್ಷಾಂತರ ಮಂದಿ ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಈ ನಡುವೆ ಮೋದಿಯವರ ಕಾರ್ಯಕ್ರಮದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿರ್ಧರಿಸಿದ್ದಾರೆ. ರಾಷ್ಟ್ರದ ಚೌಕಿದಾರನನ್ನು ಸ್ವಾಗತಿಸಲು ಚೌಕಿದಾರನಂತೆ ಅವರು ಕಾಣಿಸಿಕೊಂಡಿದ್ದಾರೆ.
![belthangadi mla](https://torrentspree.files.wordpress.com/2019/04/belthangadi-mla.jpg)
ಮಾತ್ರವಲ್ಲದೆ, ಈವರೆಗೂ ಎಲ್ಲೂ ನಡೆಯದ ಪ್ರಯೋಗಕ್ಕೂ ಕರಾವಳಿಯ ಮೋದಿ ಅಭಿಮಾನಿಗಳು ಮುಂದಾಗಿದ್ದು, ಹಲವಾರು ಮಂದಿ ಚೌಕಿದಾರನ ವೇಷ ಭೂಷಣದೊಂದಿಗೆ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
![57317136 2218094185118655 2375937670053363712 n](https://torrentspree.files.wordpress.com/2019/04/57317136_2218094185118655_2375937670053363712_n.jpg)
Discussion about this post