ಮಂಗಳೂರು : ಕಂಚಿನ ಕಂಠದ ಮೂಲಕ ಯಕ್ಷ ರಂಗದಲ್ಲಿ ಸದ್ದು ಮಾಡಿದ್ದ ಬಲಿಪ ಪ್ರಸಾದ ಭಾಗವತರು ಇನ್ನಿಲ್ಲ ಅನ್ನುವ ಸುದ್ದಿ ಯಕ್ಷಲೋಕಕ್ಕೆ ಬರಸಿಡಿಲಿನಂತೆ ಬಂದೆರಗಿದೆ.
ಮೂಡುಬಿದರೆ ಸಮೀಪದ ಮಾರೂರಿನ ನೂಯಿ ಎಂಬಲ್ಲಿ ಬಲಿಪ ನಾರಾಯಣ ಭಾಗವತರ ಪುತ್ರರಾಗಿ ಜನಿಸಿದ್ದ ಬಲಿಪ ಪ್ರಸಾದ ಭಾಗವತರು ಕಳೆದ ವರ್ಷ ಗಂಟಲಿನ ಕ್ಯಾನ್ಸರ್ ಗೆ ತುತ್ತಾಗಿದ್ದರು. ಇದಾದ ಬಳಿಕ ಚಿಕಿತ್ಸೆ ಪಡೆದಿದ್ದ ಅವರು ಚೇತರಿಸಿಕೊಂಡಿದ್ದರು. ಆದರೆ ಏಪ್ರಿಲ್ 11 ರಂದು ಸೋಮವಾರ ಸಂಜೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟು ಹೊತ್ತಿಗೆ ಅವರು ನಿರ್ಗಮಿಸಿಯಾಗಿತ್ತು.
ಗಾನವೈಭವಕ್ಕೆ ಹೊಸ ಹೊಳಪು ನೀಡಿದ್ದ ಬಲಿ ಪ್ರಸಾದ ಭಾಗವತರು, ಬಲಿಪ ಪರಂಪರೆಯ ಸಮರ್ಥ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡಿದ್ದರು.
1994ರಲ್ಲಿ ತಮ್ಮ 17ನೇ ವರ್ಷದಲ್ಲಿ ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯನ್ನು ಸೇರಿದ್ದ ಅವರು ಮೂರು ದಶಕಗಳ ಕಾಲ ರಂಗಸ್ಥಳದಲ್ಲಿ ಮೆರೆದಿದ್ದರು.
ಬಲಿಪ ಪ್ರಸಾದ್ ಭಟ್ ಅವರು ತಮ್ಮ ತಂದೆ 84ರ ಹರೆಯದ ಬಲಿಪ ನಾರಾಯಣ ಭಾಗವತ, ಪತ್ನಿ ಹಾಗೂ ಮೂವರು ಪುತ್ರಿಯರು ಮತ್ತು ಸಹೋದರರಾದ ಬಲಿಪ ಶಿವಶಂಕರ ಭಟ್, ಬಲಿಪ ಮಾಧವ ಭಟ್, ಬಲಿಪ ಶಶಿದರ ಭಟ್ ಅವರನ್ನು ಅಗಲಿದ್ದಾರೆ.
Discussion about this post