ಕಲರ್ಸ್ ಕನ್ನಡದ ಬೆಸ್ಟ್ ರಿಯಾಲಿಟಿ ಶೋ ಅನ್ನಿಸಿಕೊಂಡಿರುವ ರಾಜರಾಣಿ ಸೀಸನ್ ಎರಡಕ್ಕೆ ಕಾಲಿಟ್ಟಿದೆ. ಎಂದಿನಂತೆ ನಿಲಯದ ಗುರುಗಳೇ ತೀರ್ಪುಗಾರರಾಗಿದ್ದಾರೆ. ಸೀಸನ್ ಒಂದನ್ನು ನಡೆಸಿಕೊಟ್ಟಿದ್ದ ಅನುಪಮಾ ಗೌಡ ಅವರೇ ಸೀಸನ್ ಎರಡನ್ನೂ ಕೂಡಾ ನಿರೂಪಣೆ ಮಾಡಲಿದ್ದಾರೆ ಅನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳಾಗಿದ್ದು ಜಾನ್ವಿ ರಾಯಲ ವೇದಿಕೆ ಹತ್ತಿದ್ದಾರೆ.
ಇನ್ನು ಅನುಪಮಾ ಅವರನ್ನು ಸೀಸನ್ ಎರಡರಿಂದ ಕೈ ಬಿಟ್ಟಿರುವ ಕುರಿತಂತೆ ಹತ್ತಾರು ಸುದ್ದಿಗಳು ಹರಿದಾಡುತ್ತಿತ್ತು. ಸುವರ್ಣಗೆ ಹೋಗ್ತಾರೆ, ಝೀಗೆ ಬರ್ತಾರೆ, ವೈಯುಕ್ತಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಅನ್ನಲಾಗಿತ್ತು. ಆದರೆ ಈಗ ಎಲ್ಲಾ ವಿಷಯಗಳಿಗೂ ತೆರೆ ಬಿದ್ದಿದ್ದು, ನಾನು ಬ್ಯುಸಿಯಾಗಿಲ್ಲ, ಯಾವುದೇ ಚಾನಲ್ ಗೂ ಹೋಗ್ತಿಲ್ಲ ಅಂದಿದ್ದಾರೆ. ಆದರೆ ನನಗೆ ಕಲರ್ಸ್ ಕಡೆಯಿಂದ ಕರೆಯೇ ಬಂದಿಲ್ಲ ಎಂದು ಬಾಂಬ್ ಸಿಡಿಸಿದ್ದಾರೆ.
Discussion about this post