ರಾಜ್ಯದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದ್ದು, ಸರ್ಕಾರಿ ಕಚೇರಿಗಳಿಗೆ ಜನ ಸಾಮಾನ್ಯರು ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಕೃಷಿಕರಿಗಾಗಿ ಸರ್ಕಾರ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಕಾಂಚಾಣವಿಲ್ಲದ ಹೊರತು ಕೊಳವೆ ಬಾವಿ ಕೊರೆಸಲು ಸಾಧ್ಯವೇ ಇಲ್ಲ. ಇನ್ನು ರೈತರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಅಲ್ಲೂ ಅಷ್ಟೇ ಕೃಷಿ ಅಧಿಕಾರಿಗಳು ಭರ್ಜರಿ ಫಸಲು ಕೊಯ್ಲು ಮಾಡಿಕೊಳ್ಳುತ್ತಾರೆ.
ಹೀಗೆ ಭ್ರಷ್ಟರ ಅಬ್ಬರ ಮುಂದುವರಿಯುತ್ತಿರುವಂತೆ ಮತ್ತೊಂದು ಕಡೆ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಆದರೆ ಭ್ರಷ್ಟಚಾರ ಮಾತ್ರ ನಿಂತಿಲ್ಲ. ಹಾಗಾದ್ರೆ ವೈಫಲ್ಯ ಯಾರದ್ದು.
ಈ ನಡುವೆ ಇತ್ತೀಚೆಗೆ ಬಿಡಿಎ ಮೇಲೆ ದಾಳಿ ನಡೆಸಿದಿದ ಎಸಿಬಿ ಬ್ರಹ್ಮಾಂಡ ಭ್ರಷ್ಟಚಾರವನ್ನು ಬಯಲಿಗೆಳಿದಿತ್ತು. ಹಾಗಂತ ಈ ದಾಳಿ ಹೊಸದೇನಲ್ಲ. ಈ ಹಿಂದೆ ಅನೇಕ ದಾಳಿಗಳು ನಡೆದಿದೆ. ಮುಂದೆಯೂ ನಡೆಯುತ್ತಿರುತ್ತದೆ. ಭ್ರಷ್ಟಚಾರ ಹಾಗೂ ದಾಳಿ ಈ ವ್ಯವಸ್ಥೆಯಲ್ಲಿ ಸಹಜ ಪ್ರಕ್ರಿಯೆ ಅನ್ನಿಸಿಕೊಂಡಿದೆ.
ಇನ್ನು BDA ಮೇಲೆ ಇತ್ತೀಚೆಗೆ ನಡೆದ ಎಸಿಬಿ ದಾಳಿ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ (Anti Corruption Bureau) ಇಂದು ವಿವಿಧ ಇಲಾಖೆಯ ಮತ್ತಷ್ಟು ಅಧಿಕಾರಿಗಳ ಕೋಟೆಗೆ ದಾಳಿ ನಡೆಸಿದೆ. ಒಟ್ಟು 60 ಕಡೆ ದಾಳಿ ನಡೆದಿದ್ದು, 400ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ ಇಇ ಕೆ.ಎಸ್.ಲಿಂಗೇಗೌಡ, ಮಂಡ್ಯ ಹೆಚ್ಎಲ್ಬಿಸಿ ಇಇ ಕೆ.ಶ್ರೀನಿವಾಸ್, ದೊಡ್ಡಬಳ್ಳಾಪುರದ ಕಂದಾಯ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ, ಮಾಜಿ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್, ಬೆಂಗಳೂರು ನಿರ್ಮಿತಿ ಕೇಂದ್ರದ ಮಾಜಿ ಪ್ರಾಜೆಕ್ಟ್ ಮ್ಯಾನೇಜರ್ ಬಿ.ಕೃಷ್ಣಾರೆಡ್ಡಿ, ಬೆಂಗಳೂರು ನಂದಿನಿ ಡೇರಿಯ ಜನರಲ್ ಮ್ಯಾನೇಜರ್, ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ.ಮಸ್ತಿ ಸೇರಿ ಹಲವರ ಅಕ್ರಮ ಸಾಮಾಜ್ಯದಲ್ಲಿ ಪರಿಶೀಲನೆ ನಡೆಯುತ್ತಿದೆ.
Discussion about this post