ಸೀತಾರಾಮ ಕಲ್ಯಾಣ ಬೆನ್ನಲ್ಲೇ ನಿಖಿಲ್ ಕಲ್ಯಾಣವನೂ ನಡೆಯಲಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಮಗನಿಗೊಂದು ಮದುವೆ ಮಾಡಿಸಿ ಬಿಟ್ಟರೆ ದೊಡ್ಡದೊಂದು ಜವಾಬ್ದಾರಿಯಿಂದ ಮುಕ್ತರಾಗಬಹುದು ಅನ್ನುವುದು ಕುಮಾರಸ್ವಾಮಿ ದಂಪತಿ ಭಾವನೆ. ಹಾಗಂತ ಅದು ಎಲ್ಲಾ ತಂದೆ ತಾಯಂದಿರು ಬಯಸುವುದು ಅದನ್ನೇ, ಮಕ್ಕಳ ಎಜುಕೇಶನ್, ಅವರಿಗೊಂದು ಉದ್ಯೋಗ, ತಲೆ ಮೇಲೆ ಎರಡು ಅಕ್ಕಿ ಕಾಳು ಹಾಕಿದರ ಸಾಕು ಎಂದು ಕಾಯುತ್ತಾರೆ.
ಆಂಧ್ರ ಪ್ರದೇಶದ ಉದ್ಯಮಿಯೊಬ್ಬರ ಮಗಳನ್ನು ಸೊಸೆಯಾಗಿ ತರುವ ಕುರಿತಂತೆ ಕರ್ನಾಟಕದ ರಾಜಕೀಯದ ದೊಡ್ಮನೆ ಮಾತುಕತೆ ನಡೆಸಿದೆ.
ಈ ನಡುವೆ ಮೊಮ್ಮಗನಿಗೆ ಮದುವೆಯಂತೆ… ಕುಮಾರಸ್ವಾಮಿ ಹೆಣ್ಣು ನೋಡಲು ಹೋಗಿದ್ದಾರಂತೆ ಅನ್ನುವ ಪ್ರಶ್ನೆಗೆ ಉತ್ತರಿಸಿರುವ ದೇವೇಗೌಡರು ಅವೆಲ್ಲಾ ಪರ್ಸನಲ್ ವಿಚಾರ, ಹುಡುಗಿ ನೋಡಿಕೊಂಡು ಬಂದ್ರೆ ಮದುವೆ ಮಾಡೋಣ ಬಿಡಿ ಅಂದಿದ್ದಾರೆ.
Discussion about this post