ಕುವೈತ್ ನಲ್ಲಿ ಜೈಲು ಪಾಲಾದವರ ಪೈಕಿ ಹಲವಾರು ಮಂದಿ ಹಾಲುಣಿಸುವ ತಾಯಂದಿರಾಗಿದ್ದು ಭಾರತ ಒಟ್ಟು ಮಂದಿ ಏಕಕಾಲಕ್ಕೆ ಜೈಲಿಗೆ ಅಟ್ಟಲ್ಪಟ್ಟಿದ್ದಾರೆ
ಕುವೈತ್ ನ ಮಲಿಯಾದಲ್ಲಿರುವ ಖಾಸಗಿ ಆಸ್ಪತ್ರೆ ಮೇಲೆ ಕುವೈತ್ ಮಾನವ ಸಂಪನ್ಮೂಲ ಸಮಿತಿ ಅಧಿಕಾರಿಗಳು ನಡೆಸಿ 19 ಮಂದಿ ಕೇರಳದ ನರ್ಸ್ಗಳು ಸೇರಿ 30 ಮಂದಿ ಭಾರತೀಯರನ್ನು ಜೈಲಿಗೆ ಕಳುಹಿಸಿದ್ದಾರೆ.
ಮಾಹಿತಿಗಳ ಪ್ರಕಾರ ವಿದೇಶಿ ರೆಸಿಡೆನ್ಸಿ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತೀಯರು ಸೇರಿ 60 ಜನರನ್ನು ಬಂದಿಸಲಾಗಿದೆಯಂತೆ. ಕುವೈತ್ ಅಧಿಕಾರಿಗಳ ಪ್ರಕಾರ ದಾದಿಯರು ಕುವೈತ್ನಲ್ಲಿ ಕೆಲಸ ಮಾಡಲು ಸೂಕ್ತವಾದ ಪರವಾನಿಗೆಗಳನ್ನು ಹೊಂದಿರಲಿಲ್ಲಲ್ಲ ಹೀಗಾಗಿ ಬಂಧಿಸಲಾಗಿದೆಯಂತೆ.
ಆದರೆ ಕೇರಳದ ದಾದಿಯರ ಕುಟುಂಬ ಸದಸ್ಯರು ಕೇರಳದ ಮಾಧ್ಯಮಗಳಿಗೆ ಕೊಟ್ಟಿರುವ ಹೇಳಿಕೆ ಪ್ರಕಾರ ಅವರೆಲ್ಲರೂ ಅರ್ಹತೆ ಹೊಂದಿದ್ದು, ಸೂಕ್ತ ದಾಖಲೆಗಳನ್ನು ಕೂಡಾ ಹೊಂದಿದ್ದಾರೆ. 10 ವರ್ಷಗಳಿಂದ ಒಂದೇ ಕ್ಲಿನಿಕ್ನಲ್ಲಿ ಅವರೆಲ್ಲಾ ಕೆಲಸ ಮಾಡುತ್ತಿದ್ದಾರಂತೆ. ಅಂದ ಹಾಗೇ ಇದೇ ದಾಳಿಯಲ್ಲಿ ಫಿಲಿಪೈನ್ಸ್, ಈಜಿಪ್ಟ್ ಮತ್ತು ಇರಾನ್ನ ನಾಗರಿಕರು ಕೂಡಾ ಜೈಲು ಸೇರಿದ್ದಾರೆ.
ಬಂಧಿತ ಮಲಯಾಳಿ ನರ್ಸ್ಗಳಲ್ಲಿ ಐವರು ಹಾಲುಣಿಸುವ ತಾಯಂದಿರಾಗಿದ್ದು, ಜೈಲು ಅಧಿಕಾರಿಗಳು ನಿಗದಿತ ಸಮಯದಲ್ಲಿ ಮಕ್ಕಳಿಗೆ ಹಾಲುಣಿಸಲು ಅವಕಾಶ ಕೊಡುತ್ತಿದ್ದಾರೆ. ಆದರೆ ಮನೆಯಲ್ಲಿರುವ ಹಸುಗೂಸುಗಳನ್ನು ಮನೆ ಸದಸ್ಯರು ಜೈಲಿಗೆ ಕರೆದುಕೊಂಡ ಹೋಗಬೇಕಾಗಿದೆ. ಬಂಧಿತರ ಬಿಡುಗಡೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಘಟನೆ ಇಷ್ಟೂ ಗಂಭೀರವಾಗಿದ್ದರೂ, ಭಾರತೀಯರಿಗೆ ಮುಜುಗುರ ತರಿಸುವಂತೆ ವಿದೇಶಿ ನೆಲದಲ್ಲಿ ಮಾತನಾಡುವ ಕೇರಳದ ಸಂಸದರೊಬ್ಬರು ದಿವ್ಯ ಮೌನಕ್ಕೆ ಜಾರಿದ್ದಾರೆ.
Discussion about this post