ಮೈಸೂರು : ರಾಜ್ಯದಲ್ಲಿ ಸ್ಪಷ್ಟ ಮರಳು ನೀತಿಯನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವ ಕಾರಣ ಜನ ಇಂದಿಗೂ ಪರದಾಡುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಕಟ್ಟಡ ಕಾಮಗಾರಿಗೆ ಸಾಕಷ್ಟು ಅಡ್ಡಿಯಾಗಿದೆ. ಈ ಕಾರಣದಿಂದಲೇ ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಹಲವು ಕಡೆಗಳಲ್ಲಿ ಅಧಿಕಾರಿಗಳೇ ಈ ಅಕ್ರಮ ಮರಳುಗಾರಿಕೆ ಸಾಥ್ ಬೇರೆ ಕೊಡುತ್ತಿದ್ದಾರೆ.
ಈ ನಡುವೆ ಜನರ ಆಕ್ರೋಶಕ್ಕೆ ಮಣಿದಿರುವ ಗಣಿಗಾರಿಕೆ ಇಲಾಖೆ ರೈತರು ಹಾಗೂ ಸ್ಥಳೀಯರು ಅಗತ್ಯಕ್ಕೆ ಬೇಕಾದಷ್ಟು ಮರಳನ್ನು ಬೈಕ್ ಹಾಗೂ ಎತ್ತಿನಗಾಡಿಯಲ್ಲಿ ಸಾಗಿಸಬಹುದು ಎಂದು ಹೇಳಿದೆ. ಈ ಬಗ್ಗೆ ಮಾಹಿತಿ ಕೊಟ್ಟಿರುವ ಸಚಿವ ಮುರುಗೇಶ್ ನಿರಾಣಿ ದ್ವಿಚಕ್ರ ವಾಹನ ಮತ್ತು ಎತ್ತಿನ ಗಾಡಿಯಲ್ಲಿ ಮರಳು ಸಾಗಿಸಿದರೆ ಯಾವುದೇ ಶಿಕ್ಷೆ ಇರೋದಿಲ್ಲ ಹಾಗೂ ಹೀಗೆ ಮರಳು ಸಾಗಿಸುವವರ ವಿರುದ್ಧ ಕೇಸು ದಾಖಲಿಸದಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಅಂದಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು ಮತ್ತೆ ಮರಳು ನೀತಿ ಜಾರಿಯ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರದ 5 ಲಕ್ಷ ಸಹಾಯಧನ ಬಳಸಿ ಮನೆ ನಿರ್ಮಿಸುವವರಿಗೆ ಸರಕಾರವೇ ಉಚಿತ ಮರಳು ಪೂರೈಸಲಿದ್ದಾರೆ ಅಂದಿದ್ದಾರೆ.
Discussion about this post