ಮಂಡ್ಯ ಚುನಾವಣಾ ಕಣದಲ್ಲಿ ವೈಯುಕ್ತಿಕ ವಿಚಾರಗಳೇ ರಾರಾಜಿಸುತ್ತಿದೆ. ಅದರಲ್ಲೂ ಜೆಡಿಎಸ್ ಕಾರ್ಯಕರ್ತರು, ನಿಖಿಲ್ ಅಭಿಮಾನಿಗಳು ಎಂದು ಕರೆಸಿಕೊಂಡವರು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ್ಮಣ ರೇಖೆ ದಾಟಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಪ್ರಚಾರ ಮಾಡಬೇಕು, ನಿಖಿಲ್ ಪರವಾದ ಅಲೆ ಹೇಗೆ ಸೃಷ್ಟಿಸಬೇಕು ಎಂದು ಅರಿವಿಲ್ಲದ್ದ ಜೆಡಿಎಸ್ ಕಾರ್ಯಕರ್ತರು ಬಾಯಿಗೆ ಬಂದಂತೆ ಬರೆಯಲಾರಂಭಿಸಿದ್ದಾರೆ. ಇದು ಮುಂದೆ ನಿಖಿಲ್ ಸೋಲಿಗೆ ಕಾರಣವಾದರೂ ಅಚ್ಚರಿ ಇಲ್ಲ.
ಹಾಗಂತ ಉಳಿದವರು ಸುಮ್ಮನಿರುತ್ತಾರೆಯೇ. ಜೆಡಿಎಸ್ ಕಾರ್ಯಕರ್ತರ ಎಲ್ಲಾ ಪ್ರಶ್ನೆಗಳಿಗೆ Aruñ Gowda Darshan ಅನ್ನುವವರು ಉತ್ತರಿಸಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.
“ ಎಲ್ಲ ಅಂಬರೀಶ್ ದರ್ಶನ್ ಯಶ್ ಅಭಿಮಾನಿಗಳು ತಪ್ಪದೆ ಓದಿ ಶೇರ್ ಮಾಡಿ ಜೆಡಿಎಸ್ ಕಾರ್ಯಕರ್ತರು ದರ್ಶನ್ ಯಶ್ ಸುಮಕ್ಕ ಬಗ್ಗೆ ಕೇಳೊ ಪ್ರಶ್ನೆಗೆ ಉತ್ತರ ಇಲ್ಲಿದೆ
ದರ್ಶನ್ ಯಶ್ ಸುಮಕ್ಕನ ಪರ ಪ್ರಚಾರಕ್ಕೆ ಬಂದಿರೋದಕ್ಕೆ ಅವರ ಸಿನಿಮಾ ಬಹಿಷ್ಕಾರ ಹಾಕ್ತಿವಿ ಜೊಡಿ ಎತ್ತು ಕಟ್ಟಾಕ್ತಿವಿ ಅಂತ ರಾಜಕೀಯ ಮಾಡೋ ಜೆಡಿಎಸ್ ಕಾರ್ಯಕರ್ತರೆ ಯಶ್ ವಿಧಾನಸಭಾ ಚುನಾವಣೆ ಸಮಯದಲ್ಲಿ ಮೈಸೂರಿನ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದಾಗ ಯಾಕೆ ಸುಮ್ಮನೆ ಇದ್ದಿರಿ ಬಹಿಷ್ಕಾರ ಹಾಕಲಿಲ್ಲ ಹೇಳಿ.
ದರ್ಶನ್, ಯಶ್ ರಂತಹ ನೂರಾರು ಕಲಾವಿದರಿಗೆ ಅಂಬರೀಶ್ ಸಹಾಯ ಮಾಡಿದ್ದಾರೆ ಈಗ ಅವರೆಲ್ಲರೂ ತಂದೆ ಸಮಾನ ರಾದ ಅಂಬರೀಶ್ ನೆನಪಲ್ಲಿ ಸುಮಲತಾ ಅಂಬರೀಶ್ ಬೆಂಬಲ ಕ್ಕೆ ಬಂದಿದ್ದಾರೆ
ಅದು ಅವರ ದೊಡ್ಡ ಗುಣ…. ಇನ್ನೂ ಕೆಲವರು ಇದ್ದಾರೆ
ರಾಜಕೀಯ ವಾಗಿ ಸಹಾಯ ತಗೊಂಡಿರೊ ಕುಮಾರಸ್ವಾಮಿ, ಶಿವರಾಮೇಗೌಡ, ಸಿದ್ದರಾಮಯ್ಯ, ತಮ್ಮಣ್ಣ, ಪುಟ್ಟರಾಜು, ರಮ್ಯಾ, ಇವರೆಲ್ಲಾ ಅಂಬರೀಶ್ ಸಾವಿನ ನಂತರ ಅಂಬರೀಶ್ ಕುಟುಂಬದ ಬೆನ್ನಿಗೆ ಚೂರಿ ಹಾಕ್ತಿದ್ದಾರೆ….
ಈಗ ಮಂಡ್ಯ ದ ರಕ್ತ ಹಂಚಿಕೊಂಡಿರೊ ನಮ್ಮ ಜನತೆ ತೀರ್ಮಾನ ಮಾಡಿ ಯಾರೂ ಹಿತವರು ಎಂದು….. ನೀವೆ ಹೇಳಿ.
ಲೋಕಸಭಾ ಉಪಚುನಾವಣೆ ಸಮಯದಲ್ಲಿ ಅಂಬರೀಶ್ ಬೆಂಬಲ ನಮಗೆ ಎಂದು ಜನರಿಗೆ ತೋರಿಸಿ ಕೊಳ್ಳಲು ಅಂಬರೀಶ್ ಅಣ್ಣನ ಕಾಲಿಗೆ ಬಿದ್ದು ಆಶಿರ್ವಾದ ತೊಗೊಂಡಿದ್ದು ಯಾರು ಅಂಬರೀಶ್ ಅಣ್ಣ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲದೆ ಇದ್ದಾಗ ಕುಮಾರಸ್ವಾಮಿ ಯವರು ಅಂಬರೀಶ್ ಅಣ್ಣನ ಮನೆಗೆ ಬಂದು ಸುಮ್ಮನೆ ಭೇಟಿಮಾಡಿ ಹೊರಗಡೆ ಜನರಿಗೆ ಹಾಗೂ ಜೆಡಿಎಸ್ನ ಎಲ್ಲ ಸೋಶಿಯಲ್ ಮಿಡಿಯಾ ಪೇಜ್ಗಳಲ್ಲಿ ಅಂಬರೀಶ್ ಬೆಂಬಲ ಜೆಡಿಎಸ್ಗೆ ಅಂತ ಹಾಕೊಂಡಿದ್ದಕ್ಕೆ ನೀವು 7 ಸೀಟು ಗೆದ್ದಿದ್ದು ಮತದಾನದ ದಿನ ಅಂಬರೀಶ್ ಅಣ್ಣನ ಜೊತೆಗೆ ಜೆಡಿಎಸ್ ಅಭ್ಯರ್ಥಿ ಮತ ಕೇಂದ್ರಕ್ಕೆ ಹೋಗಿ ಚುನಾವಣೆ ದಿವಸವು ಅಂಬರೀಶ್ ಬೆಂಬಲ ತಮಗೆ ಎಂಬತೆ ಜೆಡಿಎಸ್ ಬಿಂಬಿಸಿ ಕೊಂಡಿತು . ಅಂಬರೀಶ್ ಅಣ್ಣ ಬದುಕಿದ್ದಾಗ ಸುಮ್ಮನೆ ಕೈ ಕಟ್ಕೊಂಡು ಹಿಂದೆ ನಿಲ್ಲುತ್ತಿದ್ದ ಸಚಿವ ಡಿಸಿ ತಮ್ಮಣ ಕಾವೇರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಅಂಬರೀಶಣ್ಣನಿಗೆ ಅಂಬರೀಶ್ ಅವರ ಕುಂಟುಂಬ ಮಂಡ್ಯಕ್ಕೆ ಒಂದು ತೊಟ್ಟು ನೀರು ಕೊಟ್ಟಿಲ್ಲ ಅಂತ ಮಾತಾಡಿದ್ರು ರೆವಣ್ಣ ಅವರು ಸುಮಕ್ಕನಿಗೆ ಗಂಡ ಸತ್ತು 2 ತಿಂಗಳಾಗಿಲ್ಲ ಅನ್ನೊಕ್ಕೆ ಅವರ್ಯಾರು ಅಂಬರೀಶಣ್ಣ ಬದುಕಿದ್ದಾಗ ಬಾಲ ಮುದುರಿಕೊಂಡು ಇದ್ದ ನೀವು ಅವರು ಸತ್ತ ಮೇಲೆ ಅವರ ಕುಟುಂಬದ ವಿರುದ್ಧ ಹುಚ್ಚರ ರೀತಿ ಮಾತನಾಡಿದರೆ ಅದನ್ನು ನೋಡಿ ಸುಮ್ಮನೆ ಇರೋಕೆ ಅಂಬರೀಶ್ ಅಭಿಮಾನಿಗಳು ಇನ್ನು ಸತ್ತಿಲ್ಲ
ಇನ್ನು ರೈತರಿಗೆ ಕಾವೇರಿ ಹೋರಾಟಕ್ಕೆ ದರ್ಶನ್ ಯಶ್ ಕೊಡುಗೆ ಏನು ಎಂದು ಕೇಳುವವರಿಗೆ ಉತ್ತರ ದರ್ಶನ್ ಅವರು ಕಾವೇರಿ ಹೋರಾಟಕ್ಕೆ ಪ್ರತಿಸಲವು ಚಿತ್ರಿಕರಣ ಮೊಟಕು ಗೊಳುಸಿ ಬಂದಿದ್ದಾರೆ ಹಾಗೂ ಅವರು ಖಾಸಗಿ ಕಾರ್ಯಕ್ರಮದಿಂದ ಬಂದ ಹಣವನ್ನು ರೈತರಿಗೆ ಕೊಟ್ಟಿದ್ದಾರೆ ಯಶ್ ಅವರು ಕೋಟಿಗಟಲೇ ಸ್ವಂತ ಹಣ ಕರ್ಚು ಮಾಡಿ ಕೆರೆಯ ಹೂಳನ್ನು ಎತ್ತಿಸಿದ್ದಾರೆ . ರಾಜಕಿಯದಲ್ಲಿ ಇಲ್ಲದ ಇವರಿಬ್ಬರಿಗೆ ಇಷ್ಟೆಲ್ಲಾ ಮಾಡೊದ್ರಿಂದ ಏನು ಲಾಭ ಇಲ್ಲ ಆದರೂ ಮಾಡುತ್ತಾರೆ ಇದು ಸಮಾಜ ಸೇವೆ ರಾಜಕೀಯಕೊಸ್ಕರ ಇವರು ಎಲ್ಲೂ ನಾವು ಮಣ್ಣಿನ ಮಕ್ಕಳು ಎಂದು ನಾಟಕ ಮಾಡಿಲ್ಲ.
ದರ್ಶನ್ ಯಶ್ ಅವರ ರೈತರ ಕೊಡುಗೆ ಹಾಗೂ ಎಷ್ಟು ರಸ್ತೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡೋ ಜೆಡಿಎಸ್ ಕಾರ್ಯಕರ್ತರೇ ಅದು ಸರಿ ನಿಖಿಲ್ ರಾಜಕೀಯಕ್ಕಾಗಿ ಮಂಡ್ಯಕ್ಕೆ ಬಂದಿದ್ದಾರೆ ಅಷ್ಟೇ ಮೇ ತಿಂಗಳ ಮುಂಚೆ ಅವರು ಯಾವ ರೈತ ಹೋರಾಟದಲ್ಲಿ ಬಾಗಿ ಆಗಿದ್ದಾರೆ ಅವರು ಎಷ್ಟು ರಸ್ತೆ ಮಾಡಿದ್ದಾರೆ ಹೇಳಿ
ಸುಮಲತಾ ಅವರಿಗೆ ರಾಜಕೀಯ ಅನುಭವ ಇಲ್ಲ ಅವರು ಸಿನಿಮಾದವರು ಅಂತ ಹೇಳುವ ಜೆಡಿಎಸ್ ಕಾರ್ಯಕರ್ತರೇ ನಿಖಿಲ್ ಸಿನಿಮಾದವರು ಅಲ್ವಾ ನಿಖಿಲ್ಗೆ ರಾಜಕೀಯದಲ್ಲಿ ಯಾವ ಅನುಭವ ಇದೆ . ಕುಮಾರಸ್ವಾಮಿ ಯವರು ಹಾಗೂ ಅಂಬರೀಶ್ ಅವರು ಇಬ್ಬರು 1996 ರಲ್ಲೇ ರಾಜಕೀಯಕ್ಕೆ ಬಂದಿದ್ದು ಇವೆಲ್ಲವನ್ನು ಹೋಲಿಸಿದರೆ ಇಬ್ಬರು ಒಂದೇ ಇಬ್ಬರಲ್ಲಿ ಸುಮಕ್ಕನೇ ನಮ್ಮ ಊರಿನವರು ಯಾರು ಗೆಲ್ಲಬೇಕು ಎಂದು ಮತದಾರ ತಿರ್ಮಾನಿಸುತ್ತಾನೆ .ಮಂಡ್ಯದಲ್ಲಿ ಅಂಬರೀಶ್ ಅಣ್ಣನ ಅಭಿಮಾನಿಗಳು ಇರುವ ವರೇಗು ಅಂಬರೀಶ್ ಅವರ ಕುಟುಂಬದ ಬಗ್ಗೆ ಹುಚ್ಚರ ರೀತಿ ನಿಮ್ಮ ರಾಜಕೀಯಕ್ಕಾಗಿ ಮಾತಾಡಿದ್ರೆ ನಾವು ಸಹಿಸಿಕೊಂಡು ಸುಮ್ಮನೆ ಇರೋಲ್ಲ ಉತ್ತರ ಕೊಡಬೇಕಾಗುತ್ತೆ.
Discussion about this post