ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಹೂಮಳೆ’ ಧಾರಾವಾಹಿ ಕೊನೆಗೊಂಡಿದೆ. ‘ಹೂಮಳೆ’ ಸೀರಿಯಲ್ ಕೊನೆಗೊಳ್ಳುತ್ತಿರುವ ಸುದ್ದಿ ಧಾರಾವಾಹಿಯ ಕಲಾವಿದರಿಗೆ ಹಾಗೂ ವೀಕ್ಷಕರಿಗೆ ಬೇಸರ ಉಂಟು ಮಾಡಿದೆ.
ಕಳೆದ ವರ್ಷ ಆರಂಭವಾಗಿದ್ದ ‘ಹೂಮಳೆ’ ಧಾರಾವಾಹಿಯಲ್ಲಿ ಚಂದನಾ ಅನಂತಕೃಷ್ಣ, ಯಶವಂತ್, ಸುಜಾತ ಅಕ್ಷಯ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ‘ಹೂಮಳೆ’ ಧಾರಾವಾಹಿಯ ಪ್ರಸಾರ ಪ್ರಾರಂಭವಾಗಿತ್ತು. ಆದರೆ ಇಷ್ಟು ಬೇಗ ಮುಕ್ತಾಯವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಅಂದ ಹಾಗೆ ಹಿಂದಿಯ ‘ಚೋಟಿ ಸರ್ದಾರ್ನಿ’ ಧಾರಾವಾಹಿಯ ರೀಮೇಕ್ ಈ ‘ಹೂಮಳೆ’.
Discussion about this post