ಮಂಡ್ಯ : ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್ ಡ್ಯಾಂಗೆ ಆತಂಕವಿದೆ. ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಗಣಿಗಾರಿಕೆ ನಾಳೆ ಡ್ಯಾಮ್ ಅನ್ನು ಅಪಾಯಕ್ಕೆ ತಳ್ಳಲಿದೆ. ಹೀಗಾಗಿ ಅಕ್ರಮ ಗಣಿಗಾರಿಕೆ ನಿಲ್ಲಿಸಿ ಕಟ್ಟೆ ರಕ್ಷಿಸಿ ಎಂದು ಸಂಸದೆ ಸುಮಲತಾ ಹೋರಾಟ ಪ್ರಾರಂಭಿಸಿದ್ದಾರೆ. ಈ ಸಂಬಂಧ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಸಚಿವರು, ಲೋಕಸಭಾ ಸ್ಪೀಕರ್, ಉಪರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ.
ಈ ನಡುವೆ ಕಟ್ಟೆಯ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಅನ್ನುವುದು ಸಂಸದೆ ಸುಮಲತಾ ಅವರ ಬೇಬಿ ಬೆಟ್ಟ ಭೇಟಿ ಸಂದರ್ಭದಲ್ಲಿ ಬಯಲಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯದ ಕಾರಣದಿಂದ ಮುಂದೊಂದು ದಿನ ಕನ್ನಂಬಾಡಿ ಅಪಾಯಕ್ಕೆ ತುತ್ತಾದರೂ ಅಚ್ಚರಿ ಇಲ್ಲ.
ಆದರೆ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸಾಥ್ ಕೊಡಬೇಕಾದ ದಳಪತಿಗಳು ಮಾತ್ರ ಸುಮಲತಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕುಮಾರಸ್ವಾಮಿಯವರು ಮಲಗಿಸುವ ಹೇಳಿಕೆ ಕೊಟ್ಟು, ಟೀಕೆಗೂ ಒಳಗಾಗಿದ್ದರು. ಇನ್ನೂ ಮಂಡ್ಯ ಭಾಗದ ಜೆಡಿಎಸ್ ಶಾಸಕರು ಸುಮಲತಾ ಹೋರಾಟದ ಬಳಿಕ ಇರುವೆ ಕಚ್ಚಿದಂತೆ ಓಡಾಡುತ್ತಿರುವುದ್ಯಾಕೆ ಅನ್ನುವುದೇ ಯಕ್ಷ ಪ್ರಶ್ನೆ.
ಈ ನಡುವೆ ಡ್ಯಾಂಗೆ ವಕ್ರ ದೃಷ್ಟಿ ಬಿದ್ದಿರುವ ಬಗ್ಗೆ ಆರೋಪಿಸಿರುವ ಶ್ರೀರಂಗಪಟ್ಟಣ ಶಾಸಕ ರವೀಂದ್ರಶ್ರೀಕಂಠಯ್ಯ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಜಲಾಶಯಕ್ಕೆ ದೃಷ್ಟಿದೋಷ ಪೂಜೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜು.26ರ ಸೋಮವಾರ ಬೆಳಿಗ್ಗೆ 9ಕ್ಕೆ ವೇದಬ್ರಹ್ಮ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದೆ.
ಪೂಜೆ ನಡೆಸುವುದರಲ್ಲಿ ತಪ್ಪಿಲ್ಲ, ದೃಷ್ಟಿ ತೆಗೆಯುವುದೂ ಕೂಡಾ ತಪ್ಪಲ್ಲ. ಆದರೆ ಈ ದೃಷ್ಟಿ ತೆಗೆಯುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಅನುಮತಿ ಇದೆಯೇ ಅನ್ನುವುದು ಈಗಿರುವ ಪ್ರಶ್ನೆ. ಒಂದು ವೇಳೆ ಅನುಮತಿ ಸಿಕ್ಕಿದೆ ಅನ್ನುವುದಾದ್ರೆ ದೃಷ್ಟಿ ತೆಗೆದ್ರೆ ಅಕ್ರಮ ಗಣಿಗಾರಿಕೆಯಿಂದ ಆಗಬಹುದಾದ ಅಪಾಯದಿಂದ ಪಾರಾಗಬಹುದೇ ಅನ್ನುವ ಪ್ರಶ್ನೆಗೆ ಜಿಲ್ಲಾಡಳಿತ ಉತ್ತರಿಸಬೇಕು.
ಹೀಗೆಲ್ಲಾ ದೃಷ್ಟಿ ತೆಗೆದು ಡ್ಯಾಮ್ ಉಳಿಸುತ್ತೇವೆ ಅನ್ನುವ ಬದಲಾಗಿ ಅಕ್ರಮ ಗಣಿಗಾರಿಕೆ ನಿಲ್ಲಿಸುವ ಕೆಲಸ ಮಾಡಲು ಅದೇನೂ ದಾಡಿಯೋ ಇವರಿಗೆ
Discussion about this post