ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಿಯಮಗಳನ್ನು ಬಡವರ್ಗದ ಮಂದಿ ಕಡ್ಡಾಯವಾಗಿ ಪಾಲಿಸಬೇಕು. ಸೆಲೆಬ್ರೆಟಿಗಳು, ರಾಜಕಾರಣಿಗಳು, ವಿಐಪಿ ಎಂದು ಕರೆಸಿಕೊಂಡವರಿಗೆ ಕೊರೋನಾ ನಿಯಮಗಳು ಅನ್ವಯವಾಗೋದಿಲ್ಲ.
ಇದಕ್ಕೆ ಸಾಕ್ಷಿ ಅನ್ನುವಂತೆ ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿದೆ, ನಡೆಯುತ್ತಿದೆ. ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭಗಳಲ್ಲಿ ಕೊರೋನಾ ನಿಯಮಗಳನ್ನು ಪಾಲಿಸಲೇ ಇಲ್ಲ.
ಇದೀಗ ಉಪಚುನಾವಣೆಯ ಪ್ರಚಾರದಲ್ಲೂ ಕೊರೋನಾ ನಿಯಮಗಳು ಲೆಕ್ಕಕ್ಕಿಲ್ಲ.
ಇನ್ನು ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಪ್ರಾರಂಭವಾಗಿದೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದಂತೆ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಭರ್ಜರಿ ಪ್ರಚಾರ ನಡೆಸುತ್ತಿದೆ.
ಹೋದ ಕಡೆಗಳಲ್ಲಿ ಸಾವಿರಾರು ಜನ ಸೇರುತ್ತಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ಈ ಸಂಖ್ಯೆಯಲ್ಲಿ ಜನ ಸೇರುವುದು ಅಪರಾಧ. ಆದರೆ ಜಿಲ್ಲಾಡಳಿತಗಳು ಈ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ.
ಬದಲಾಗಿ ಬಡವರೇನಾದರೂ ಸರ್ಕಾರದ ನಿಯಮ ಉಲ್ಲಂಘಿಸಿದ್ರೆ ಇಷ್ಟು ಹೊತ್ತಿಗೆ ನಿಯಮ ಉಲ್ಲಂಘಿಸಿದವರನ್ನು ಜೈಲಿಗಟ್ಟಿಯಾಗಿರುತ್ತಿತ್ತು.
ಯುವರತ್ನ ಸಿನಿಮಾ ಪ್ರಚಾರ ಸಲುವಾಗಿ ಪುನೀತ್ ಬರುತ್ತಾರೆ ಅನ್ನುವ ಕಾರಣಕ್ಕೆ ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಪುನೀತ್ ಸೇರಿದಂತೆ ಯಾರೊಬ್ಬರೂ ಮಾಸ್ಕ್, ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ. ನಾಳೆ ಇದೇ ಕಾರಣಕ್ಕಾಗಿ ಕರ್ನಾಟಕಕ್ಕೆ ಕೇರಳದ ಪರಿಸ್ಥಿತಿ ಎದುರಾದ್ರೆ ಯಾರು ಹೊಣೆ ಅನ್ನುವುದಕ್ಕೆ ಟೀಂ ಯುವರತ್ನ ಬಳಿ ಉತ್ತರವಿಲ್ಲ.
Discussion about this post