ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ‘ಮುಕಾಬಲಾ’ ಸಿನಿಮಾ ಹಾಡಿಗೆ ತಂಡವೊಂದು ಯಕ್ಷಗಾನ ವೇಷ ಧರಿಸಿ ನೃತ್ಯ ಮಾಡಿದ್ದು ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಝೀ ಕನ್ನಡ ಪದೇ ಪದೇ ನಮ್ಮ ಸಹನೆ ಕೆಣಕುತ್ತಿದೆ. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂತವರಿಗೂ ಕರಾವಳಿಯ ಭಾವನೆಗಳು ಅರ್ಥವಾಗದಿರುವುದು ದುರಂತ ಅನ್ನುವ ಟೀಕೆಗಳು ಕೇಳಿ ಬಂದಿದೆ.
ಯಕ್ಷಗಾನದ ಆರಾಧನಾ ಪರಂಪರೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕಲೆಗೆ ಅಪಚಾರ ಎಸಗಲಾಗಿದೆ. ಹೀಗಾಗಿ ಅನೇಕರು ವಾಹಿನಿ ಕಚೇರಿಗೂ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊದಲೇ ‘ಯಕ್ಷಗಾನ ಕಲೆ ಸಂಕಷ್ಟದಲ್ಲಿದೆ. ಅದನ್ನು ಉಳಿಸಿ ಬೆಳೆಸಲು ಹರ ಸಾಹಸ ಪಡುತ್ತಿರುವ ಸಂದರ್ಭದಲ್ಲಿ ಅನ್ಯ ರಂಗದತ್ತ ಈ ಕಲೆಯನ್ನು ಕೊಂಡೊಯ್ಯುವುದು ಸರಿಯಲ್ಲ. ಇದರಿಂದ ವೀಕ್ಷಕರಿಗೆ ಯಕ್ಷಗಾನದ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ ಅನ್ನುವ ಆತಂಕ ಯಕ್ಷಗಾವ ಪ್ರಿಯರದ್ದು.
ಈ ನಡುವೆ ಯಕ್ಷಗಾನ ಪ್ರಿಯರ ಕೋಪ ಝೀ ಕನ್ನಡ ವಾಹಿನಿಯಿಂದ ನಿರೂಪಕಿ ಅನುಶ್ರೀಯತ್ತ ತಿರುಗಿದೆ. ಕರಾವಳಿಯವರಾದ ಅನುಶ್ರೀ ಅವರಿಗೆ ಯಕ್ಷಗಾನ ಕಲೆಯ ಬಗ್ಗೆ ಅರಿವಿದೆ.ಯಕ್ಷಗಾನ ಎಷ್ಟು ಪವಿತ್ರ ಕಲೆ ಅನ್ನುವುದು ಗೊತ್ತಿದೆ. ಕನಿಷ್ಠ ಪಕ್ಷ ಅವರು ಈ ಬಗ್ಗೆ ಮಾತನಾಡಬಹುದಿತ್ತು.
ಅಸಾಧ್ಯವಾಯ್ತು ಅಂದರೆ ಕಾರ್ಯಕ್ರಮ ಮುಗಿದ ಮೇಲಾದರೂ ಮಾತನಾಡಬಹುದಿತ್ತು ಎಂದು ಕೆಂಡ ಕಾರುತ್ತಿದ್ದಾರೆ.
ಒಂದು ನಿಟ್ಟಿನಲ್ಲಿ ಝೀ ಕನ್ನಡ ಬಹುಸಂಖ್ಯಾತರ ಸಹನೆ ಕೆಣಕುತ್ತಿದೆ. ಹಿಂದೊಮ್ಮೆ ಬ್ರಾಹ್ಮಣ ಸಮುದಾಯ ಆಕ್ರೋಶಕ್ಕೆ ಚಾನೆಲ್ ಗುರಿಯಾಗಿತ್ತು. ಜೊತೆಗೆ ಇದೇ ವಾಹಿನಿಯಲ್ಲಿ ಬರುತ್ತಿರುವ ಹಾಸ್ಯ ಕಾರ್ಯಕ್ರಮ ಅಶ್ಲೀಲತೆಯಿಂದ ಕೂಡಿದೆ ಅನ್ನುವುದು ಸತ್ಯ. ಆದರೆ TRP ಈ ಕಾರ್ಯಕ್ರಮಗಳಿಗೆ ಬರುತ್ತಿರುವುದರಿಂದ ಝೀ ಕನ್ನಡ ಮುಖ್ಯಸ್ಥರು ಇಂಥ ಆಕ್ರೋಶಗಳಿಗೆ ತಲೆ ಕೆಡಿಸಿಕೊಳ್ಳುವುದು ಅನ್ನುವುದು ನೆನಪಿರಲಿ.
Discussion about this post