ಮಂಗಳೂರು : ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆಸಿದ ನಾಗಿರಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ, ಸೋಮನಾಥ ನಾಯಕ್ ಗೆ ವಿಧಿಸಿದ 3 ತಿಂಗಳ ಸಜೆಯನ್ನು ಪುನರುಚ್ಛರಿಸಿದೆ.
ಈ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಕಟಣೆಯೊಂದು ಹೊರ ಬಿದ್ದಿದ್ದು, ಆಪ್ತ ಕಾರ್ಯದರ್ಶಿ ಎವಿ. ಶೆಟ್ಟಿ ಸಹಿ ಮಾಡಿದ್ದಾರೆ.
ಶ್ರೀಕ್ಷೇತ್ರದಿಂದ ದಾಖಲಿಸಲ್ಪಟ್ಟಿದ್ದ ಮೂಲ ದಾವೆ ಸಂಖ್ಯೆ 226ಯ2013ರಲ್ಲಿ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕ್ ಹಾಗೂ ಇತರರ ವಿರುದ್ಧ ಶ್ರೀಕ್ಷೇತ್ರ ಹಾಗೂ ಹೆಗ್ಗಡೆ ಮತ್ತು ಅವರ ಕುಟುಂಬ ಹಾಗೂ ಸಂಸ್ಥೆಗಳ ಗೌರವಕ್ಕೆ ಹಾನಿಯಾಗುವ ಹೇಳಿಕೆ ಆರೋಪ ಮಾಡದಂತೆ ಬೆಳ್ತಂಗಡಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
ಆದರೆ ಈ ಆದೇಶ ಪದೇ ಪದೆ ಉಲ್ಲಂಘನೆಯಾಗುತ್ತಿದ್ದ ಕಾರಣ ಶ್ರೀಕ್ಷೇತ್ರದಿಂದ ಮತ್ತೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 2 ಬಾರಿ ಸೋಮನಾಥ ನಾಯಕ್ ಗೆ ಜೈಲು ಶಿಕ್ಷೆ ವಿಧಿಸಿತ್ತು. ಅದರ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿಯ ಅರ್ಜಿ ತನಿಖೆಗೆ ಮೂಲ ಕೋರ್ಟ್ ಗೆ ಮರು ರವಾನಿಸಲಾಗಿತ್ತು. ಇದೀಗ ಸಿವಿಲ್ ನ್ಯಾಯಾಧೀಶರು ಜೂನ್ 8 ರಂದು ಹಿಂದಿನ ತೀರ್ಪನ್ನು ಪುನರುಚ್ಛರಿಸಿದ್ದು, 3 ತಿಂಗಳ ಜೈಲು ಶಿಕ್ಷೆ ಹಾಗೂ ಸ್ಥಿರಾಸ್ಥಿ ಮುಟ್ಟುಗೋಲು ಹಾಕಿ ಶ್ರೀ ಕ್ಷೇತ್ರಕ್ಕೆ 4.50 ಲಕ್ಷ ಪರಿಹಾರ ನೀಡಲು ಸೂಚಿಸಿದ್ದಾರೆ. ಹಾಗೂ ಶ್ರೀಕ್ಷೇತ್ರಕ್ಕೆ ಉಪಟಳ ಮತ್ತು ಕೋರ್ಟ್ ಅವಧಿ ದುರುಪಯೋಗಕ್ಕೆ ಹೆಚ್ಚುವರಿ 2 ಸಾವಿರ ಪರಿಹಾರಕ್ಕೆ ಸೂಚಿಸಲಾಗಿದೆ.
Discussion about this post