ಉಡುಪಿ : ಕೊರೋನಾ ಸೋಂಕು ನಿವಾರಿಸುವ ನಿಟ್ಟಿನಲ್ಲಿ ಲಸಿಕಾ ವಿತರಣಾ ಕಾರ್ಯಕ್ರಮ ಯುದ್ದೋಪಾದಿಯಲ್ಲಿ ನಡೆದಿದೆ. ಜನರ ನಿರ್ಲಕ್ಷ್ಯದ ನಡುವೆ ಆರೋಗ್ಯ ಕಾರ್ಯಕರ್ತರು ಲಸಿಕೆ ವಿತರಣೆಗೆ ಇನ್ನಿಲ್ಲದ ಶ್ರಮ ಹಾಕುತ್ತಿದ್ದಾರೆ.
ಈ ನಡುವೆ ಲಸಿಕೆ ಕುರಿತಂತೆ ಕೆಲವೊಂದು ಗಾಳಿ ಸುದ್ದಿಗಳು ಹರಡುತ್ತಿರುವುದು ಜನತೆಯ ನಿರ್ಲಕ್ಷ್ಯಕ್ಕೊಂದು ನೆಪ ಒದಗಿಸಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗಾಳಿ ಸುದ್ದಿಗಳನ್ನು ಮತ್ತು ಜನರ ಅನುಮಾನಗಳನ್ನು ನಿವಾರಿಸುವ ಕೆಲಸ ಮಾಡಬೇಕಾಗಿದೆ.
ಈ ನಡುವೆ ಕೊರೋನಾ ಲಸಿಕೆಯ ಎರಡು ಡೋಸ್ ಗಳನ್ನು ಪಡೆದ ಬಳಿಕವೂ ಮಣಿಪಾಲದ ವೈದ್ಯ ದಂಪತಿಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಅಚ್ಚರಿ ಅಂದ್ರೆ ಅವರಿಗೆ ಎರಡನೇ ಡೋಸ್ ಪಡೆದ ಮೂರು ವಾರಗಳ ಬಳಿಕ ಸೋಂಕು ತಗುಲಿದೆ.
ಕೆಲ ದಿನಗಳ ಹಿಂದೆ ವೈದ್ಯ ದಂಪತಿ ಮುಂಬೈನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿಮಾನ ಮೂಲಕ ತೆರಳಿದ್ದರು. ಬಳಿಕ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ.
ಈ ನಡುವೆ ಮಾತನಾಡಿರುವ ಅವರು ಒಂದು ವರ್ಷಗಳ ಕಾಲ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಂಡೆವು, ಎರಡನೆಯ ಡೋಸ್ ಪಡೆದ ಬಳಿಕ ಸುರಕ್ಷಿತರೆಂದು ಭಾವಿಸಿ ನಿರ್ಲಕ್ಷ್ಯ ಮಾಡಿದೆವು, ಹೀಗಾಗಿಯೇ ಸೋಂಕು ತಗುಲಿದೆ ಅಂದಿದ್ದಾರೆ.
ಕೆಲ ವೈದ್ಯರು ಹೇಳುವ ಪ್ರಕಾರ ಎರಡನೇ ಡೋಸ್ ಪಡೆದ 45 ದಿನಗಳ ಕಾಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲೇಬೇಕಂತೆ. ಬಳಿಕವೇ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಬೆಳೆಯಲಾರಂಭಿಸುತ್ತದೆ.
Discussion about this post