ಹಲವು ದಶಕಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಬೆಲ್ಜಿಯಂ ಎದುರು ಶರಣಾಗಿದೆ. ಈ ಮೂಲಕ ಫೈನಲ್ ಕನಸು ನುಚ್ಚು ನೂರಾಗಿದೆ. 5-2 ಗೋಲು ಅಂತರದಲ್ಲಿ ಮನ್ ಪ್ರೀತ್ ಪಡೆಗೆ ಸೋಲು ಕಂಡಿದ್ದು ಕಂಚಿನ ಪದಕದ ಅಸೆಯೊಂದು ಉಳಿದುಕೊಂಡಿದೆ.
ಮೊದಲ ಕ್ವಾರ್ಟರ್ ನ ಎರಡೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದು ಗೋಲು ಬಾರಿಸಿದ ಬೆಲ್ಜಿಯಂ ಖಾತೆ ತೆರೆಯಿತು. ಆರಂಭದಲ್ಲೇ ಹಿನ್ನಡೆಯಾಗುತ್ತಿರುವುದನ್ನು ಗಮನಿಸಿದ ಭಾರತದ ಆಟಗಾರರು ಎಚ್ಚೆತ್ತುಕೊಂಡರು. ಹೀಗಾಗಿ ಭಾರತಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಮನ್ದೀಪ್ ಸಿಂಗ್ ಗೋಲಾಗಿ ವರಿವರ್ತಿಸಿ 1-1ರ ಸಮಬಲ ಹೋರಾಟಕ್ಕೆ ನಿಂತರು.
ಇದಾದ ಬಳಿಕ ಭಾರತ ತಂಡ ಮತ್ತೊಂದು ಗೋಲು ಬಾರಿಸಿ 02-01 ಮೂಲಕ ಮೊದಲ ಕ್ವಾರ್ಟರ್ ಅಂತ್ಯದ ವೇಳೆ ಭಾರತ ಮುನ್ನಡೆ ಸಾಧಿಸಿತ್ತು.
ಎರಡನೇ ಕ್ವಾರ್ಟರ್ ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬೆಲ್ಜಿಯಂ ಗೋಲಾಗಿ ಪರಿವರ್ತಿಸಿ ಸಮಬಲ ಹೋರಾಟಕ್ಕೆ ಮುಂದಾಯ್ತು. ಸಮಬಲದ ಹೋರಾಟದಲ್ಲಿ ಎರಡೂ ತಂಡಗಳು ಅಕ್ರಮಣಕಾರಿ ಆಟವಾಡಿದ ಪರಿಣಾಮ 02-02 ಗೋಲುಗಳೊಂದಿಗೆಪಂದ್ಯ ಮುಕ್ತಾಯವಾಯ್ತು. ಇನ್ನು ಮೂರನೇ ಕ್ವಾರ್ಟರ್ ನಲ್ಲೂ ಯಾರಿಗೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲಯ ಹೀಗಾಗಿ 02-02 ಗೋಲುಗಳೊಂದಿಗೆ ಈ ಪಂದ್ಯವೂ ಮುಕ್ತಾಯವಾಯ್ತು.
ನಿರ್ಣಾಯಕ ನಾಲ್ಕನೇ ಕ್ವಾರ್ಟರ್ ನಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡ ಬ್ರೆಜಿಲ್ 03-03ರ ಮುನ್ನಡೆ ಪಡೆಯಿತು. ಇನ್ನೇನು ಪಂದ್ಯ ಮುಗಿಯಲು 8 ನಿಮಿಷಗಳಿದೆ ಅನ್ನುವಾಗ ಬ್ರೆಜಿಲ್ ನ ಅಲೆಕ್ಸಾಂಡರ್ ಹೆಂಡ್ರಿಕ್ ಮತ್ತೊಂದು ಗೋಲು ಬಾರಿಸಿ ಹ್ಯಾಟ್ರಿಕ್ ಹೀರೋ ಅನ್ನಿಸಿಕೊಂಡರು. ಕೊನೆಯ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಬ್ರೆಜಿಲ್ 05-02 ಗೋಲುಗಳೊಂದಿಗೆ ವಿಜಯದ ನಗೆ ಬೀರಿತು. ಕೊನೆಯ ಕ್ವಾರ್ಟರ್ ನಲ್ಲಿ ಭಾರತ ಇನ್ನಷ್ಟು ಅಕ್ರಮಣಕಾರಿ ಆಟವಾಡುತ್ತಿದ್ರೆ ಭಾರತ ಗೆಲುವು ಪಡೆಯಬಹುದಿತ್ತು.
Discussion about this post