ಬೆಂಗಳೂರು : ಜನರೇ ಎಚ್ಚೆತ್ತುಕೊಳ್ಳುತ್ತಾರೆ, ಕೊರೋನಾ ನಿಯಮಗಳನ್ನು ಪಾಲಿಸುತ್ತಾರೆ ಎಂದು ಕಾದು ಕೂತ್ರೆ ಕೊರೋನಾ ಕರ್ನಾಟಕವನ್ನು ಮತ್ತೊಮ್ಮೆ ಹಿಂಡಿ ಹಿಪ್ಪೆ ಮಾಡಲಿದೆ.
ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಠಿಣ ಕ್ರಮಗಳನ್ನು ಜಾರಿ ಮಾಡದಿದ್ರೆ ಕೊರೋನಾ ಮತ್ತಷ್ಟು ಅಬ್ಬರಿಸಲಿದೆ.
ಕೊರೋನಾ ಅತ್ಯಂತ ವೇಗವಾಗಿ ಹರಡುವ ಚಿತ್ರಮಂದಿರ, ರಾಜಕೀಯ ಸಮಾವೇಶ,ಶಾಲಾ ಕಾಲೇಜು ಹಾಸ್ಟೆಲ್ ಗಳ ಬಗ್ಗೆ ನಿಗಾ ವಹಿಸದಿದ್ರೆ ಅಪಾಯ ಗ್ಯಾರಂಟಿ.
ಈ ನಡುವೆ ಶನಿವಾರ ರಾಜ್ಯದಲ್ಲಿ 1798 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ.
ಒಟ್ಟು 7 ಮಂದಿ ಇಂದು ಕೊರೋನಾಗೆ ಬಲಿಯಾಗಿದ್ದು, ಪ್ರಸ್ತುತ ರಾಜ್ಯದಲ್ಲಿ 12828 ಸಕ್ರಿಯ ಪ್ರಕರಣಗಳಿವೆ.
ಈ ಪೈಕಿ 134 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಒಂದೇ ದಿನ 1030 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇನ್ನು ಕೊರೋನಾ ಸೋಂಕಿನ ಖಚಿತ ಪ್ರಮಾಣ 1.91ಕ್ಕೆ ಏರಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ ಅನ್ನಲಾಗಿದೆ.
Discussion about this post