ಮಂಗಳೂರು : ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಿ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲಿನ ಇರಿತ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಶಾಕಿಂಗ್ ಸುದ್ದಿಗಳು ಸಿಗಲಾರಂಭಿಸಿದೆ.
ದಾಳಿ ಸಂಬಂಧ ಮಾಯಾ ಗ್ಯಾಂಗ್ ಅನ್ನುವ ಸಂಘಟನೆಯೊಂದರ ಪಾತ್ರದ ಕುರಿತಂತೆ ಸಾಕ್ಷಿ ಸಂಗ್ರಹಿಸಿರುವ ಪೊಲೀಸರು ತಂಡದ ಸದಸ್ಯರ ಹೆಡೆ ಮುರಿ ಕಟ್ಟಿದ್ದಾರೆ.
ಇದೀಗ ಇದೇ ಕೃತ್ಯದಲ್ಲಿ ಕಾರ್ಖಾನಾ ಗ್ಯಾಂಗ್ ಅನ್ನುವ ಮತ್ತೊಂದು ತಂಡ ಪಾತ್ರವೂ ಗೊತ್ತಾಗಿದೆ. ಈಗಾಗಲೇ ಕಾರ್ಖಾನಾ ಗ್ಯಾಂಗ್ ನ ಮೂವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಬಂಧಿತರನ್ನು ಅಕ್ಬರ್ , ಮಹಮ್ಮದ್ ಶಾಕೀರ್, ಮತ್ತು ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ.
ಹೊಸದಾಗಿ ಹುಟ್ಟುಹಾಕಿರುವ ಕಾರ್ಖಾನಾ ಗ್ಯಾಂಗ್ ನಲ್ಲಿ 25 ರಿಂದ 30 ವರ್ಷದ ಯುವಕರೇ ಸದಸ್ಯರಾಗಿದ್ದು, ಅವರಿಗೆ ಪೊಲೀಸರ ಮೇಲೆ ದಾಳಿ ಮಾಡುವ ತರಬೇತಿಗಳನ್ನು ನೀಡಲಾಗಿದೆ. ಮಾತ್ರವಲ್ಲದೆ ಬಂಧನವಾದ ಬಳಿಕ ಏನು ಮಾಡಬೇಕು, ಜೈಲಿಗೆ ಹೋದಾಗ ಏನು ಮಾಡಬೇಕು ಅನ್ನುವ ತರಬೇತಿಗಳನ್ನು ಕೂಡಾ ನೀಡಲಾಗಿದೆ.
ಜೊತೆಗೆ ಆರೋಪಿಗಳ ಜಾಮೀನು, ಅವರ ಮನೆಗಳಿಗೆ ಆರ್ಥಿಕ ನೆರವು ಕುರಿತಂತೆಯೂ ಸಂಘಟನೆ ನೀಲ ಸಕ್ಷೆಯನ್ನು ಹೊಂದಿತ್ತು ಅನ್ನುತ್ತಿವೆ ಪೊಲೀಸ್ ಮೂಲಗಳು.
ಈ ಎರಡೂ ಸಂಘಟನೆಗಳ ಮಾಸ್ಟರ್ ಪ್ಲಾನ್ ಗಳನ್ನು ನೋಡಿದರೆ ದೊಡ್ಡದೊಂದು ಸಂಘಟನೆ ಅವದರ ಹಿಂದಿರುವುದು ಪೊಲೀಸರಿಗೆ ಗೊತ್ತಾಗಿದೆ.
ಹೀಗಾಗಿ ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ ಸಂದರ್ಭದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕೊಟ್ಟ ನಾಯಕರು ಈ ಸುದ್ದಿಗೆ ಉತ್ತರಿಸಲೇಬೇಕು.
ಅವತ್ತು ಗೋಲಿಬಾರ್ ವಿಷಯದಲ್ಲಿ ಕಣ್ಣೀರು ಹಾಕಿದ ಖಾದಿಗಳು ಈಗ ಸೈಲೆಂಟ್ ಆಗಿರುವುದನ್ನು ನೋಡಿ ಜನ ಅರಿತುಕೊಳ್ಳಬೇಕಾಗಿದೆ.
Discussion about this post