ಬೆಂಗಳೂರು : ಚಂದನವನದಲ್ಲಿ ತಾರಾ ತಮ್ಮದೇ ನಟನಾ ಶೈಲಿಯಿಂದ ಗುರುತಿಸಿಕೊಂಡವರು. ಯಾವುದಾದರೂ ಸಿನಿಮಾ ತಾರಾ ಇದ್ದಾರೆ ಅಂದ್ರೆ ಈ ಪಾತ್ರಕೊಂದು ತೂಕವಿರುತ್ತದೆ.
ಈ ಹಿಂದೆ ರಾಜಕೀಯದಲ್ಲಿ ಬ್ಯುಸಿ ಇದ್ದಾಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದ ತಾರಾ ಅದೇಕೋ ಈ ಬಾರಿ ಸಿನಿಮಾದಿಂದ ದೂರ ಸರಿಯುತ್ತಿದ್ದಾರೆ.
ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲಂತು ತಾರಾ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ.
ತಾರಾ ಅವರ ಈ ನಿರ್ಧಾರದಿಂದ ತಾರಾ ಅವರನ್ನೇ ಗಮನದಲ್ಲಿ ಇಟ್ಟುಕೊಂಡು ಕಥೆ ಬರೆದ ನಿರ್ದೇಶಕರು ತಲೆ ಕೆಡಿಸಿಕೊಂಡಿದ್ದಾರೆ.
ಧನಂಜಯ್ ನಾಯಕರಾಗಿರುವ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಉತ್ತರ ಕನ್ನಡ ಗೌಡ್ತಿಯಾ ತಾರಾ ಕಾಣಿಸಿಕೊಳ್ಳಬೇಕಾಗಿತ್ತು, ಆದರೆ ನಿಗಮದ ಕಾರ್ಯದ ಒತ್ತಡ ಹೆಚ್ಚಾಗಿರುವ ಕಾರಣ ಇದೀಗ ‘ರತ್ನನ್ ಪ್ರಪಂಚ’ ಚಿತ್ರದಿಂದ ಹೊರ ಬಂದಿದ್ದಾರೆ. ಇದೀಗ ಅದೇ ಪಾತ್ರ ನಟಿ ಶೃತಿ ಜೀವ ತುಂಬಲಿದ್ದಾರೆ.
‘ರತ್ನನ್ ಪ್ರಪಂಚ’ ಮಾತ್ರವಲ್ಲದೆ ಒಪ್ಪಿಕೊಂಡಿದ್ದ ಇನ್ನೆರಡು ಚಿತ್ರಗಳಿಂದ ಹೊರ ಬಂದಿರುವ ಅವರು ನಿಗಮದ ಕಾರ್ಯದ ಒತ್ತಡದಿಂದ ನಟಿಸಲು ಅಸಾಧ್ಯ ಅಂದಿದ್ದಾರೆ.
ಒಟ್ಟಿನಲ್ಲಿ ನಿಗಮದ ಅವಧಿ ಮುಗಿಯೋ ತನಕ ತಾರಾ ಅವರ ಅಭಿನಯ ನೋಡಲು ಸಾಧ್ಯವಿಲ್ಲ
Discussion about this post