Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ದೇವರ ಮುಂದೆ ಕನ್ನಡಕ್ಕೆ ಕಿತ್ತಾಟ – ವಿಡಿಯೋ ಅಸಲಿಯೇ ಆದರೆ ಕಥೆ ಬೇರೊಂದಿದೆ…

Radhakrishna Anegundi by Radhakrishna Anegundi
August 12, 2018
in ಟ್ರೆಂಡಿಂಗ್
arch
Share on FacebookShare on TwitterWhatsAppTelegram

ಇಂದು ಮುಂಜಾನೆಯಿಂದ ಫೇಸ್ ಬುಕ್ ನಲ್ಲಿ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಮ್ಮ ಫೇಸ್ ಬುಕ್ ಪೇಜ್ ನಲ್ಲೂ ಬೆಳ್ಳಂದೂರು ಎಕೋ ಸ್ಪೇಸ್ ಬಳಿ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ಕನ್ನಡಕ್ಕಾಗಿ ಹೋರಾಟದ ವಿಡಿಯೋ ಹಾಕಿದ್ದೇವೆ. ಆದರೆ ವಿಷಯವನ್ನು ಹೀಗೆ ಬಿಡುವುದು ಸರಿಯಲ್ಲ, ಅಬ್ಬರಿಸುವ ಬದಲು ವಿಷಯ ಏನು ಎಂದು ತಿಳಿದುಕೊಳ್ಳೋಣ ಎಂದು ನಾವು ಹೊರಟಾಗ ಮತ್ತೊಂದು ಕಥೆ ಅನಾವರಣಗೊಂಡಿದೆ.

ಬೆಳ್ಳಂದೂರು ಎಕೋ ಸ್ಪೇಸ್ ಬಳಿ ವೆಂಕಟೇಶ್ವರ ದೇವಾಲಯಕ್ಕೆ ಹೋದ ಕರುನಾಡ ಸೇವಕರು ತಂಡದ ಕನ್ನಡತಿ ಅನು ಅನ್ನುವವರು ತೆಲುಗು ಪೂಜೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ ಅಲ್ಲೇ ಇದ್ದ ಕನ್ನಡಿಗರು ಜಾಗೃತಿಯಾಗಿರಲಿಲ್ಲ. ಬದಲಾಗಿ ಕನ್ನಡತಿ ಮೇಲೆ ತಿರುಗಿ ಬಿದ್ದಿದ್ದರು. ಜೊತೆಗೆ ದೇವಸ್ಥಾನದ ಮಂದಿ ಕೂಡಾ ರಂಪಾಟ ಮಾಡಿದ್ದರು. ಇದು ಖಾಸಗಿ ದೇವಸ್ಥಾನ ಅನ್ನುವ ಸಮಜಾಯಿಷಿ ಬೇರೆ ಕೊಟ್ಟಿದ್ದರು.

ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯನ್ನು ನಾವು ಸಂಪರ್ಕಿಸಿದಾಗ ಅವರು ಮೊದಲು ಹುಡುಗಿಯೇ ಮೇಲೆ ದೂರುಗಳ ಸುರಿಮಳೆಗೈದರು. ದೇವಸ್ಥಾನ ಮುಚ್ಚುವ ಸಮಯವಾಗಿತ್ತು. ಹೀಗಾಗಿ ಅವರು ರಂಪಾಟ ಮಾಡಿದರು ಎಂದರು. ಅವೆಲ್ಲಾ ಬೇರೆ ಕಥೆ. ವಿಡಿಯೋದಲ್ಲಿ ಕನ್ನಡಕ್ಕಾಗಿ ಆಕೆ ದನಿ ಎತ್ತಿದ್ದಾರೆ ಅದರ ಬಗ್ಗೆ ಪ್ರತಿಕ್ರಿಯಿಸಿ ಎಂದಾಗ ನಮ್ಮೊಂದಿಗೆ ಮಾತನಾಡಿದ ಪುರುಷೋತ್ತಮ್ ಅನ್ನುವವರು ( ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ)

“ ಸರ್ ನಮಗೂ ಕನ್ನಡದ ಬಗ್ಗೆ ಪ್ರೀತಿಯಿದೆ, ನಾವು ಕನ್ನಡಿಗರೇ..ಆದರೆ ನಮಗೆ ಕನ್ನಡ ಬರುವು ಆಗಮ ಶಾಸ್ತ್ರ ಪಾಂಡಿತ್ಯ ಪಡೆದ ಅರ್ಚಕರು ಸಿಗುತ್ತಿಲ್ಲ. ಈ ಹಿಂದೆ ಕನ್ನಡದ ಅರ್ಚಕರು ನಮ್ಮಲ್ಲಿದ್ದರು. ಆದರೆ ಅವರು ಬೇರೆ ಕಡೆ ಹೋದರು. ಬಳಿಕ ಕನ್ನಡ ಅರ್ಚಕರಿಗಾಗಿ ನೂರಾರು ದೇವಸ್ಥಾನ ಸುತ್ತಿದ್ದೇನೆ. ಹತ್ತಾರು ಮಂದಿಗೆ ಮನವಿ ಮಾಡಿದ್ದೇನೆ. ಆದರೆ ಯಾರೊಬ್ಬರೂ ಬರಲು ಸಿದ್ದರಿಲ್ಲ. ಸಿದ್ದರಿಲ್ಲ ಅನ್ನುವುದಕ್ಕಿಂತ ಅರ್ಚಕರೇ ಸಿಕ್ಕಿಲ್ಲ ನನಗೆ”

ಅರ್ಚಕರು ಸಿಕ್ಕಿಲ್ಲ ಎಂದು ದೇವಸ್ಥಾನಕ್ಕೆ ಬಾಗಿಲು ಹಾಕುವುದು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ತೆಲುಗು, ತಮಿಳು ಅರ್ಚಕರನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ನಮಗಿದೆ. ಯಾರಾದರೂ ಕನ್ನಡ ಬರೋ, ಅಗಮಶಾಸ್ತ್ರದಲ್ಲಿ ಪಾಂಡಿತ್ಯ ಪಡೆದ ಅರ್ಚಕರಿದ್ದಾರೆ ತಿಳಿಸಿ. 15 ಸಾವಿರ ಸಂಬಳ, ಉಳಿದುಕೊಳ್ಳಲು ವ್ಯವಸ್ಥೆ, ತಟ್ಟೆ ಹಣದಲ್ಲಿ ಕಮಿಷನ್, ವಿಶೇಷ ಪೂಜೆ, ಅಭಿಷೇಕ,ಹೋಮ ಹವನಗಳು ಬುಕ್ಕಿಂಗ್ ಆದರೆ ಅದರಲ್ಲಿ ಒಂದಿಷ್ಟು ದುಡ್ಡು ಅರ್ಚಕರಿಗೆ ಸೇರುತ್ತದೆ.

ಹೀಗಾಗಿ ನಿಮಗೆ ಗೊತ್ತಿದ್ದರೆ ಕನ್ನಡ ಅರ್ಚಕರನ್ನು ನಮಗೆ ರೆಫರ್ ಮಾಡಿ ಎಂದು ಅವರು ತಮ್ಮ ನಂಬರ್ ಅನ್ನು ಕೂಡಾ ಕೊಟ್ಟಿದ್ದಾರೆ. ಅವರ ಸಂಖ್ಯೆ 8884133226.

ನಿಮಗೇನಾದರೂ ಸೂಕ್ತ ಕನ್ನಡ ಅರ್ಚಕರು ಸಿಕ್ಕರೆ ದಯವಿಟ್ಟು ತಿಳಿಸಿ.

ಹಾಗಂತ ಯುವತಿಯ ಜೊತೆಗೆ ದೇವಸ್ಥಾನದ ಮಂದಿ ವರ್ತಿಸಿದ ರೀತಿ ಸರಿ ಇಲ್ಲ. ಅದಕ್ಕೆ ಅವರು ಕ್ಷಮೆ ಕೇಳಲೇಬೇಕು. ಕನಿಷ್ಠ ಪಕ್ಷ ನಮ್ಮಲ್ಲಿ ಹೇಳಿದ ಸಮಸ್ಯೆಯನ್ನು ಇದೇ ಕನ್ನಡ ಹೋರಾಟಗಾರ್ತಿಗೆ ಮನವರಿಕೆ ಮಾಡಬಹುದಿತ್ತು. ಅದನ್ನು ಮಾಡದೆ ಹಾರಾಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನು ನೇತ್ರಾ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ.

ದೇವಸ್ಥಾನದಲ್ಲಿ ಏನಾಯ್ತು ಅನ್ನುವುದರ ವಿಡಿಯೋ ಇಲ್ಲಿದೆ

Tags: KannadaAnu Nethraಅನು ನೇತ್ರಾTemple
ShareTweetSendShare

Discussion about this post

Related News

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

sanath krishna muliya project-cheetah-puttur-veterinarian-travelled-with-big-cats-from-namibia

ಚೀತಾ ಕರೆ ತಂದ ತಂಡದಲ್ಲಿದ್ದ ಕನ್ನಡಿಗನಿಗೆ ಭೇಷ್ ಅಂದ ಪ್ರಧಾನಿ ನರೇಂದ್ರ ಮೋದಿ ( sanath krishna muliya)

Vastralankara seva:ತಿರುಪತಿ ತಿಮ್ಮನಿಗೆ 50 ಲಕ್ಷ ರೂಪಾಯಿ ದಂಡ : ವಸ್ತ್ರಾಲಂಕಾರ ಸೇವೆಗೆ ನಿರಾಕರಣೆ

Chikkaballapura : ಅಜ್ಜಿಯನ್ನು ನಿರ್ಲಕ್ಷ್ಯಿಸಿದ ಮೊಮ್ಮಗಳು : ಜಮೀನು ವಾಪಾಸ್ ಕೊಡಿಸಿದ ಉಪವಿಭಾಗಾಧಿಕಾರಿ

Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ

King Cobra Car : ಕಾರಿನಲ್ಲಿ ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳ ಪ್ರವಾಸ : ಕೇರಳದಲ್ಲೊಂದು ಭಯಾನಕ ಘಟನೆ

belagavi leopard : ಚಿರತೆ ಹಿಡಿಯಲು ಮೂತ್ರ ತಂದ ಅರಣ್ಯಾಧಿಕಾರಿಗಳು : ಹನಿ ಟ್ರ್ಯಾಪ್ ತಂತ್ರಕ್ಕೆ ಬಕ್ರ ಆಗುತ್ತಾ…

Tumakuru : ಮುಂಜಿಗೆ ಹೆದರಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೋದ ಅರ್ಚಕ ವಾಪಾಸ್

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Independence day : ವಿಧಾನಸೌಧದ ಮೇಲೆ ಧ್ವಜ ಹಾರಿಸುವವರ ಬಗ್ಗೆ ನಿಮಗೆಷ್ಟು ಗೊತ್ತು…

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್