ಮಂಗಳೂರು : ಆಗಸ್ಟ್ 4 ರಂದು ಶಿಕ್ಷಕಿಯೊಬ್ಬರ ಕುತ್ತಿಗೆಯಿಂದ ಸರ ಕದ್ದ ಪ್ರಕರಣ ಬೇಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಹಳೆ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಚಿಕ್ಕಮಗಳೂರಿನ ಶ್ರೇಯಸ್ ಎಂದು ಗುರುತಿಸಲಾಗಿದೆ.
ಆಗಸ್ಚ್ 4 ರಂದು ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ಶಿಕ್ಷಕಿ ವಿದ್ಯಾ ಅವರು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಶ್ರೇಯಸ್ ಕುತ್ತಿಗೆಗೆ ಕೈ ಹಾಕಿ 2 ಪವನ್ ತೂಕದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿ ಟಿವಿ ಪೂಟೇಜ್ ಆಧಾರದಲ್ಲಿ ಆರೋಪಿ ಶ್ರೇಯಸ್ ನನ್ನು ಬಂಧಿಸಿದ್ದಾರೆ. ಈತ 2019ನೇ ವರ್ಷದಲ್ಲಿ ಸುರತ್ಕಲ್ ಕಾಲೇಜಿನ ಬಿಸಿಎ ವಿದ್ಯಾರ್ಥಿಯಾಗಿದ್ದ ಎಂದು ಗೊತ್ತಾಗಿದೆ. ಕೆಲಸ ಸಿಗದೆ ನಿರುದ್ಯೋಗಿಯಾಗಿದ್ದ ಎಂದು ಗೊತ್ತಾಗಿದೆ.
Discussion about this post