ನವದೆಹಲಿ : ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಈವರೆಗೆ ಬಂದ ಎಲ್ಲಾ ಸರ್ಕಾರಗಳು ಸಾಫ್ಟ್ ಕಾರ್ನರ್ ತಳೆದಿದೆ.
ಒಂದು ವೇಳೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವ ಮನಸ್ಸಿದ್ರೆ ಇಷ್ಚೊಂದು ಒಂದೇ ಒಂದು ಅಕ್ರಮ ಗಣಿ ಇರುತ್ತಿರಲಿಲ್ಲ.
ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಇನ್ನು 100 ವರ್ಷ ಕಳೆದರೂ ಎಂಜಲು ಕಾಸಿಗೆ ಕೈಯೊಡ್ಡುವ ಮಂದಿ ಇದ್ದೇ ಇರುತ್ತಾರೆ ಅಕ್ರಮ ಗಣಿಗಾರಿಕಯೂ ಇರುತ್ತದೆ.
ಈ ನಡುವೆ ಮಂಡ್ಯದ 15 ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ಕುರಿತಂತೆ ಸಂಸದೆ ಸುಮಲತಾ ಅಂಬರೀಶ್ ಲೋಕಸಭೆ ಪ್ರಸ್ತಾಪಿಸಿದ್ದಾರೆ.
ದೇಶದ ಅಭಿವೃದ್ಧಿಗೆ ಗಣಿಗಾರಿಕೆ ಎಷ್ಟು ಮುಖ್ಯವೋ, ಅಕ್ರಮ ಗಣಿಗಾರಿಕೆಗಳ ಮೇಲೆ ಕ್ರಮ ಕೈಗೊಳ್ಳುವುದು ಕೂಡಾ ಮುಖ್ಯ.
ನನ್ನ ಕ್ಷೇತ್ರದ ಅಂದರೆ ಮಂಡ್ಯದ 15 ಗ್ರಾಮದ 2500 ಎಕರೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.
ಈ ಸಂಬಂಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಪ್ರಕಾಶ್ ಜಾವಡೇಕರ್, ಅಕ್ರಮ ಗಣಿಗಾರಿಕೆ ತಡೆಯೋದು ರಾಜ್ಯದ ಹೊಣೆಯಾಗಿದೆ. ಪರಿಸರಕ್ಕೆ ಹಾನಿ ಮಾಡುವ ಕಂಪನಿಗಳ ವಿರುದ್ಧ ದೊಡ್ಡ ಮೊತ್ತದ ದಂಡ ಸೇರಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಅಂದರು.
ಅಕ್ರಮ ಗಣಿಗಾರಿಕೆ ತಡೆಯುವುದು ರಾಜ್ಯ ಸರ್ಕಾರದ ಕೆಲಸ ಅನ್ನೋದು ಸಂಸದರಿಗೆ ಖಂಡಿತಾ ಗೊತ್ತಿರುತ್ತದೆ.
ಹಾಗಿದ್ದರೂ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ರೆ ಅಂದ್ರೆ ಯಡಿಯೂರಪ್ಪ ಸರ್ಕಾರ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಎಡವಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸಂಸದರೇ ಹೇಳುತ್ತಿದ್ದಾರೆ. ಹಾಗಾದ್ರೆ ಮಂಡ್ಯ ಜಿಲ್ಲಾಡಳಿತ ಏನು ಮಾಡುತ್ತಿದೆ.
2500 ಎಕರೆಯಲ್ಲಿ ಅಕ್ರಮ ಗಣಿಗಾರಿಕೆ ಅಂದರೆ ಜಿಲ್ಲಾಡಳಿತಕ್ಕೆ ಗೊತ್ತಿರಲು ಸಾಧ್ಯವೇ. ಹೀಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತಿದೆ.
ಏನೇ ಇರಲಿ ಲೋಕಸಭೆಯಲ್ಲಿ ಮಾನಹರಾಜುಗೊಂಡ ಮೇಲಾದ್ರೂ ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ಕೈಗೊಳ್ಳುತ್ತದೆಯೇ ಕಾದು ನೋಡಬೇಕು
Discussion about this post