ಬೆಂಗಳೂರು : ಮೂರನೇ ಅಲೆ ಬರಲಿದೆ ಎಚ್ಚರಿಕೆ ವಹಿಸಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದಾರೆ. ಎರಡನೇ ಅಲೆ ಸಂದರ್ಭದಲ್ಲಿ ಚಿತ್ರನಟರು ಕೊರೋನಾ ನಿಯಮ ಉಲ್ಲಂಘಿಸಿ ಚಿತ್ರದ ಪ್ರಚಾರ ನಡೆಸಿದರ ಬಗ್ಗೆಯೂ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅದೇ ಸುಧಾಕರ್ ಸಾಮಾಜಿಕ ಅಂತರ, ಮಾಸ್ಕ್ ಎಲ್ಲವನ್ನೂ ಮರೆತು ಸಂಸದೆ ಸುಮಲತಾ ಬರ್ತ್ ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಊರಿಗೆಲ್ಲಾ ನೀತಿ ಪಾಠ ಮಾಡೋ ಆರೋಗ್ಯ ಸಚಿವರ ವರ್ತನೆ ಇದೀಗ ಕನ್ನಡಿಗರ ಆಕ್ರೋಶ ಕಾರಣವಾಗಿದೆ. ಜೊತೆಗೆ ವೈರಲ್ ಆಗಿರುವ ಸುಮಲತಾ ಹುಟ್ಟುಹಬ್ಬ ಸೆಲೆಬ್ರೆಷನ್ ಫೋಟೋ ಗಳನ್ನು ನೋಡಿದರೆ ಇಡೀ ಕಾರ್ಯಕ್ರಮದಲ್ಲಿ ಕೊರೋನಾ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟ.
ಹೀಗಾಗಿಯೇ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದು, ಸರ್ಕಾರದ ನಿಯಮಗಳು ಕಾನೂನು ಎಲ್ಲವೂ ಜನ ಸಾಮಾನ್ಯರಿಗೆ ಹೊರತು ಸೆಲೆಬ್ರೆಟಿಗಳಿಗಲ್ವ ಎಂದು ಪ್ರಶ್ನಿಸುತ್ತಿದ್ದಾರೆ. ಸುಮಲತಾ ಜಾಗದಲ್ಲಿ ಬೇರೆ ಯಾರೇ ಸಿಂಪಲ್ ಆಗಿ ಮದುವೆ ಮಾಡಿದ್ರೆ ಸಾಕಿತ್ತು ಅಧಿಕಾರಿಗಳು ದಾಳಿ ಮಾಡಿ ರಾಡಿ ರಂಪಾಟ ಎಬ್ಬಿಸುತ್ತಿರಲಿಲ್ವ ಅನ್ನುವುದು ಅವರ ಆಕ್ರೋಶ.
ಈಗಾಗಲೇ ವಿಜಯೋತ್ಸವದ ನೆಪದಲ್ಲಿ ರಾಜಕಾರಣಿಗಳು ಕೊರೋನಾ ನಿಯಮಗಳನ್ನು ಗಾಳಿ ತೂರಿಯಾಗಿದೆ. ಮುಂದಿನ ಹೆಜ್ಜೆ ಅನ್ನುವಂತೆ ಹುಟ್ಟುಹಬ್ಬದ ಹೆಸರಿನಲ್ಲಿ ಸಂಭ್ರಮ ಶುರುವಾಗಿದೆ. ಜನ ಸಾಮಾನ್ಯರು ಕಾರ್ಯಕ್ರಮ ಮಾಡಬೇಕಾದರೆ ಪೊಲೀಸ್, ಪಂಚಾಯತ್ ಅನುಮತಿಗಳು ಬೇಕು. ಗಣೇಶನ ಹಬ್ಬ ಮಾಡ್ತೀವಿ ಅಂದ್ರೆ ಆಗ ಕೊರೋನಾ ಅಡ್ಡ ಬರುತ್ತದೆ. ಸೆಲೆಬ್ರೆಟಿಗಳ ಸೆಲೆಬ್ರೆಷನ್ ಸಂದರ್ಭದಲ್ಲಿ ಕೊರೋನಾ ವೈರಸ್ ನಿದ್ದೆ ಮಾಡುತ್ತದೆಯೇ ಅನ್ನುವ ನೆಟ್ಟಿಗರ ಪ್ರಶ್ನೆಗೆ ಉತ್ತರವೆಲ್ಲಿದೆ.
Discussion about this post