ಬೆಂಗಳೂರು : ಕರ್ನಾಟಕದ ಸಿಂಗಂ ಎಂದೇ ಹೆಸರಾದ ಖಡಕ್ಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಇದೀಗ ಫುಲ್ ಟೈಮ್ ರಾಜಕಾರಣಿ.
ತಮಿಳುನಾಡಿನಲ್ಲಿ ನಿಂತ ನೀರಾಗಿರುವ ರಾಜಕೀಯಕ್ಕೆ ಹೊಸ ನೀರು ಬೆರೆಸುವ ಕೆಲಸವನ್ನು ಮಾಡುತ್ತಿದ್ದಾರೆ.
ಮಾತ್ರವಲ್ಲದೆ ತಮಿಳುನಾಡಿನಲ್ಲಿ ಜಡಗಟ್ಟಿದ ಬಿಜೆಪಿಗೆ ಹೊಸ ಚೈತನ್ಯ ಮೂಡಿಸುವ ಕೆಲಸವನ್ನು ಅಣ್ಣಾಮಲೈ ಮಾಡುತ್ತಿದ್ದಾರೆ.
ಇದನ್ನೂ ಓದಿ : ಸಿಟಿ ರವಿ ಮುಂದೆ ಕೈ ಕಟ್ಟಿ ನಿಂತ ಪೋಟೋ ಹಿಂದಿನ ರಹಸ್ಯವೇನು..? ವೈರಲ್ ಆಯ್ತು ಸಿಂಗಂ ಅಣ್ಣಾಮಲೈ ಫೋಟೋ…
ಈ ರಾಜಕೀಯ ಒತ್ತಡದ ನಡುವೆ ಕೆ ಅಣ್ಣಾಮಲೈ ಇದೀಗ ಇದೀಗ ಲೇಖಕರಾಗಿ ಹೊರಹೊಮ್ಮಿದ್ದಾರೆ. Stepping Beyond Khaki: Revelations of a Real-Life Singham ಅನ್ನುವ ಪುಸ್ತಕವನ್ನು ಬರೆದಿರುವ ಅವರು, ತಮ್ಮ ಪೊಲೀಸ್ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಹಲವು ಪೊಲೀಸ್ ಸಿಬ್ಬಂದಿ ಪೈಕಿ ಕೆಲವರನ್ನು ನೆನಪಿಸಿದ್ದಾರೆ.
ಅವರ ಕಾರ್ಯಗಳು ಇಲಾಖೆಗೆ ಹೇಗೆ ಒಳ್ಳೆ ಹೆಸರು ತಂದಿದೆ ಅನ್ನುವುದನ್ನು ವಿವರಿಸಿದ್ದಾರೆ.
ಪೊಲೀಸರು ಬರೆದ ಪುಸ್ತಕ ಅಂದ ಮೇಲೆ ರೋಚಕತೆಯನ್ನು ತುಂಬಬೇಕಾಗಿಲ್ಲ. ಪ್ರತಿಯೊಂದು ಪ್ರಕರಣ ಹಿಂದೆ ಬೀಳುವುದು ಅಂದ್ರೆ ರೋಚಕತೆ ಅನ್ನುವುದು ಬೇಡ ಬೇಡ ಅಂದರೂ ಬಂದು ಕುಳಿತುಕೊಳ್ಳುತ್ತದೆ. ಹಾಗೇ ಈ ಪುಸ್ತಕದಲ್ಲೂ.
ಇನ್ನು ಇದೇ ಪುಸ್ತಕದಲ್ಲಿ ಇಲಾಖೆಯ ಭ್ರಷ್ಟಚಾರದ ಬಗ್ಗೆಯೂ ಅಣ್ಣಾಮಲೈ ಬೆಳಕು ಚೆಲ್ಲಿದ್ದಾರೆ. ಯಾವುದೇ ರಾಜಕೀಯ ಪಕ್ಷ, ರಾಜಕೀಯ ವ್ಯಕ್ತಿಗಳ ಹೆಸರು ಪ್ರಸ್ತಾಪಿಸದೆ ಸೂಕ್ಷ್ಮವಾಗಿ ಎಲ್ಲವನ್ನೂ ವಿವರಿಸಿದ್ದಾರೆ.
Discussion about this post