ರಾಜ್ಯೋತ್ಸವ ದಿನದಂದು ಕನ್ನಡ ಧ್ವಜ ಹಾರಿಸಲು ಅವಕಾಶ ಕೊಡದ ಕಾರಣದಿಂದ ರಾಜ್ಯ ಸರ್ಕಾರ ಇದೀಗ ಜನರಿಂದ ಉಗಿಸಿಕೊಳ್ಳುತ್ತಿದೆ.
ಈ ನಡುವೆ ರಾಯಚೂರು ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಮಾಡಿದ ಕರ್ನಾಟಕ ರಾಜ್ಯೋತ್ಸವ ಭಾಷಣ ವೈರಲ್ ಆಗುತ್ತಿದೆ.
ಭಾಷಣದಲ್ಲಿ ಸಚಿವರು ಉಚ್ಛರಿಸಿದ ಕೆಲ ಕನ್ನಡ ಪದಗಳನ್ನು ಪಟ್ಟಿ ಮಾಡಿದ್ದೇವೆ. ಉಳಿದ ಶಬ್ಧಗಳನ್ನು ಪಟ್ಟಿ ಮಾಡಿ , ವಿಡಿಯೋ ಹಾಕಿದ್ದೇವೆ.
ಬೇಂದ್ರೆ – ಬೇರೆಂದ್ರ, ಸಂಘ ಸಂಸ್ಥೆಗಳು – ಸಂಘ ಸಮಸ್ಯೆಗಳು, ಸ್ವತಂತ್ರ – ಸಸಂತ್ರಿ, ಅಂದರೆ – ಅಂದ್ರಗೀನ, ದೇನಾಂಪ್ರಿಯ ಅಶೋಕ – ದೇವ ಪ್ರಾಣಿಯ ಅಶೋಕ, ಪ್ರಗತಿ ಪಥದಲ್ಲಿ – ಪ್ರಗತಿ ಪದಕದಲ್ಲಿ ಹೀಗೆ ಕನ್ನಡದ ಪದಗಳನ್ನು ಶ್ರೀರಾಮುಲು ಜಜ್ಜಿ ನರಳಾಡುವಂತೆ ಮಾಡಿದ್ದರು. ಕನ್ನಡ ಅಕ್ಷರಗಳ ಕಗ್ಗೊಲೆಯಾಗುತ್ತಿದ್ದರೆ ಕನ್ನಡ ಮಾತೆ ಮೌನವಾಗಿ ಕಣ್ಣೀರು ಹಾಕುತ್ತಿದ್ದಳು.
Discussion about this post